Publish Date: Wed, 06 Sep 2017 (08:34 IST)
Updated Date: Wed, 06 Sep 2017 (08:37 IST)
ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಬಗ್ಗೆ ಇದೀಗ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಒಂದು ಮೂಲದ ಪ್ರಕಾರ ಗೌರಿ ಲಂಕೇಶ್ ಹಂತಕರು ಆಕೆಯನ್ನು ಕಚೇರಿಯಿಂದಲೇ ಹಿಂಬಾಲಿಸಿಕೊಂಡು ಬಂದಿದ್ದರು.
ಓರ್ವ ಹಂತಕ ಮನೆಯ ಬಳಿ ಹೊಂಚು ಹಾಕಿದ್ದ. ಇನ್ನಿಬ್ಬರು ಗೌರಿ ಲಂಕೇಶ್ ತಮ್ಮ ಪತ್ರಿಕೆಯ ಸಂಚಿಕೆ ಕೆಲಸ ಮುಗಿಸಿ ಕಚೇರಿ ಬಾಗಿಲು ಮುಚ್ಚಿ ಮನೆಗೆ ಕಾರಿನಲ್ಲಿ ಮರಳುವಾಗ ಗಾಂಧಿಬಜಾರಿನಿಂದಲೇ ಹಿಂಬಾಲಿಸಿಕೊಂಡು ಬರುತ್ತಿದ್ದರು ಎನ್ನಲಾಗಿದೆ.
ತಮ್ಮನ್ನು ಯಾರೋ ಹಿಂಬಾಲಿಸುತ್ತಿರುವಂತೆ ಅನಿಸುತ್ತಿದೆ ಎಂದು ಗೌರಿ ತಮ್ಮ ಮನೆಯವರಿಗೆ ತಿಳಿಸಿದ್ದರು ಎಂದು ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮನೆಯ ಬಳಿ ಹೊಂಚು ಹಾಕಿದ್ದ ಹಂತಕನಿಗೆ ಬೈಕ್ ನಲ್ಲಿ ಹಿಂಬಾಲಿಸುತ್ತಿದ್ದವರು ಮಾಹಿತಿ ನೀಡುತ್ತಿದ್ದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಇದೀಗ ಈ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ.