Webdunia - Bharat's app for daily news and videos

Install App

ವಿದೇಶಗಳ ಜತೆ ಕಿಡ್ನಿ ಮಾರಾಟಗಾರರ ಲಿಂಕ್: ಆರೋಪಿಗಳು ಅಂದರ್ !

Webdunia
ಶನಿವಾರ, 19 ಜನವರಿ 2019 (14:28 IST)
ಆ ಜಿಲ್ಲೆಯ  ಪಟ್ಟಣವೊಂದರಲ್ಲಿ ಕಿಡ್ನಿ ಮಾರಾಟ ಜಾಲಕ್ಕೆ ಸಿಲುಕಿ ಹಣವನ್ನು ಕಳೆದುಕೊಂಡು ಮಹಿಳೆಯೊಬ್ಬಳು ಆತ್ಮಹತ್ಯೆಗೀಡಾಗಿದ್ದಳು. ಈ ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿದ್ದು, ಕಿಡ್ನಿ ಮಾರಾಟ ಜಾಲ ವಿದೇಶಕ್ಕೂ ವಿಸ್ತರಣೆ ಆಗಿರುವುದನ್ನು ಪತ್ತೆ ಹಚ್ಚಿದ್ದಾರೆ.

ಮಂಡ್ಯ ಪೊಲೀಸರು ಕಿಡ್ನಿ ಮಾರಾಟ ಜಾಲ ಬೇಧಿಸಿದ್ದಾರೆ. ಸಕ್ಕರೆ ನಾಡಿನ ಕಿಡ್ನಿ ಮಾರಾಟ ಜಾಲ ವಿದೇಶಿ ಕಿಡ್ನಿ ಮಾರಾಟ ಜಾಲದ ಜೊತೆ ತಳುಕು ಹಾಕಿಕೊಂಡಿದೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಕಳೆದ ಜನವರಿ 9ರಂದು ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಗಂಗಾಮತಸ್ಥರ ಕಾಲೋನಿಯ ವೆಂಕಟಮ್ಮ  ಬಡ ಮಹಿಳೆ ಪಕ್ಕದ ಬೀದಿಯ ತಾರಾ ಎಂಬ ಕಿಡ್ನಿ ಮಾರಾಟ ಮಾಡುವ ಮಹಿಳೆಯ ವಂಚನೆಗೆ ಒಳಗಾಗಿದ್ದಳು. ತಾರಾ ಎಂಬಾಕೆ ವೆಂಕಟಮ್ಮಳ ಬಡತನವನ್ನ ಬಂಡವಾಳ ಮಾಡಿಕೊಂಡು ಕಿಡ್ನಿ ಕೊಟ್ಟರೆ 30 ಲಕ್ಷ ಹಣ ಕೊಡೋದಾಗಿ ನಂಬಿಸಿ, ಕಿಡ್ನಿ ಕೊಡುವ ಮೊದಲು ನೀನೇ ಮುಂಗಡ ಹಣ ಕೊಡಬೇಕೆಂದು ಹೇಳಿ ವೆಂಕಟಮ್ಮ ಬಳಿ ಸಾಲ ಮಾಡಿಸಿ ಎರಡು ಲಕ್ಷದ ಎಂಬತ್ತು ಸಾವಿರ ಹಣ ಪಡೆದುಕೊಂಡಿದ್ದಳು. ಸಾಲ ಮಾಡಿ ಹಣ ಕೊಟ್ಟಿದ್ದ ಬಡ ಮಹಿಳೆ ವೆಂಕಟಮ್ಮ ಇತ್ತ ಕಿಡ್ನಿಯನ್ನು ಕೊಡಲಾಗದೇ ಹಣವೂ ವಾಪಸ್ ಬರದ್ದಿರಿಂದ 30 ಲಕ್ಷದ ಆಸೆಗೆ ಲಕ್ಷಾಂತರ ರೂ. ಸಾಲ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು.

ಈ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿರುವ ಮಂಡ್ಯ ಜಿಲ್ಲೆಯ ಪೊಲೀಸರು ಪ್ರಮುಖ ಆರೋಪಿ ತಾರಾ ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ. ಮಂಡ್ಯ ಹಾಗೂ ರಾಮನಗರ ಜಿಲ್ಲೆ ಮೂಲದವರ ತಾರಾ, ಗೋಪಾಲ್, ತಿಮ್ಮಯ್ಯ, ರಾಜು ಹಾಗೂ ಜವರಯ್ಯ ಎಂಬುವರನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ ಕಿಡ್ನಿ ಮಾರಾಟದ ಕರಾಳ ಮುಖವಾಡವನ್ನು ಬಯಲಿಗೆಳೆದಿದ್ದಾರೆ. ಶ್ರೀಲಂಕಾ, ಸಿಂಗಾಪೂರ್ ಸೇರಿದಂತೆ ವಿದೇಶಗಳ ಜೊತೆಯೂ ಕಿಡ್ನಿ ಮಾರಾಟ ದಂಧೆಯ ಸಂಬಂಧವನ್ನ ಆರೋಪಿಗಳು ಹೊಂದಿದ್ದಾರೆ ಎನ್ನಲಾಗಿದೆ.  


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

Karnataka Weather: ಬೆಂಗಳೂರಿಗರಿಗೂ ಎಚ್ಚರ, ರಾಜ್ಯದ ಹವಾಮಾನ ಪರಿಸ್ಥಿತಿ ಹೇಗಿದೆ ನೋಡಿ

ಮುಂದಿನ ಸುದ್ದಿ
Show comments