Publish Date: Mon, 28 Jan 2019 (19:11 IST)
Updated Date: Mon, 28 Jan 2019 (19:13 IST)
ಬರ ಅಧ್ಯಯನದ ವೇಳೆ ಅಧಿಕಾರಿಗಳಿಗೆ ಬಿಎಸ್ ವೈ ತರಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.
ಯಾದಗಿರಿಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆಯಿಂದ ಬಿಎಸ್ ವೈ ಗೆ ಟಾಂಗ್ ನೀಡಿದ್ದಾರೆ.
ಅಧಿಕಾರಿಗಳು ಎಲ್ಲರ ಕಾಲದಲ್ಲೂ ಇರುತ್ತಾರೆ. ನಾವು ಅವರ ಮುಂದೆ ದರ್ಪ ತೋರಿಸಬಾರು. ಒಂದು ವೇಳೆ ಅವರು ಕೆಲಸ ಮಾಡದಿದ್ದ್ರೆ ಅದಕ್ಕೆ ಬೇರೆ ಮೆಥಡ್ ಇದೆ. ಅವುಗಳನ್ನು ಬಳಸಿಕೊಂಡು ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳಬೇಕು.
ಬಾಯಿ ಚಟ ತೀರಿಸಿಕೊಳ್ಳಲು ಆ ರೀತಿಯಲ್ಲಿ ಮಾತನಾಡವುದು ತಪ್ಪು ಎಂದು ಬಿಜೆಪಿ ರಾಜ್ಯಾಧ್ಯಕ್ಷರ ನಡೆಗೆ ಕಿಡಿಕಾರಿದ್ದಾರೆ.