Select Your Language

Notifications

webdunia
webdunia
webdunia
webdunia

ಕಾಳದಂಧೆಕೋರರ ಮೇಲೆ ಖಾಕಿ ದಾಳಿ

Khaki attack on smugglers
ಬಳ್ಳಾರಿ , ಶನಿವಾರ, 29 ಅಕ್ಟೋಬರ್ 2022 (17:48 IST)
ಗಣಿನಾಡು ಬಳ್ಳಾರಿಯಲ್ಲಿ ಅಕ್ರಮ ಪಡಿತರ ದಂಧೆ ನಿಲ್ಲುತ್ತಿಲ್ಲ. ಅಕ್ರಮ ಪಡಿತರ ಸಾಗಾಟ ಎಗ್ಗಿಲ್ಲದೇ ನಡೆಯುತ್ತಿದೆ. ಬಳ್ಳಾರಿ ಜಲ್ಲೆಯ ವಕ್ರಾಣಿ ಕ್ಯಾಂಪ್ ಬಳಿ ಕಾಳದಂಧೆಕೋರರ ವಿರುದ್ಧ ಪೊಲೀಸರು ದಾಳಿ ನಡೆಸಿದ್ದಾರೆ. ಪಡಿತರ ಅಕ್ಕಿ ಲೋಡ್ ಮಾಡುವಾಗ ಗ್ರಾಮೀಣ ಠಾಣೆಯ ಪೊಲೀಸರ ದಾಳಿ ನಡೆಸಿದ್ದಾರೆ. ಆರೋಪಿಗಳಿಂದ 200 ಕ್ವಿಂಟಾಲ್​ಗೂ ಅಧಿಕ ಪಡಿತರ ಅಕ್ಕಿ ಜಪ್ತಿ ಮಾಡಲಾಗಿದೆ. ಸ್ಥಳೀಯವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ದಂಧೆಕೋರರು ಬೇರೆಡೆ ಸಾಗಿಸುತ್ತಿದ್ದರು. ಸದ್ಯ ಅಕ್ರಮ ಪಡಿತರ ಸಾಗಿಸುತ್ತಿದ್ದ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಕಾಳದಂಧೆಕೋರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಇಂಡಿಗೋ ವಿಮಾನದಲ್ಲಿ ಬೆಂಕಿ