Select Your Language

Notifications

webdunia
webdunia
webdunia
webdunia

ಕುಮಾರಕೃಪ ಅತಿಥಿಗೃಹಕ್ಕೆ ಹೋಗಿ ಕಕ್ಕಾಬಿಕ್ಕಿಯಾದ ಸಚಿವ ಖಾದರ್

ಕುಮಾರಕೃಪ ಅತಿಥಿಗೃಹಕ್ಕೆ ಹೋಗಿ ಕಕ್ಕಾಬಿಕ್ಕಿಯಾದ ಸಚಿವ ಖಾದರ್
ಬೆಂಗಳೂರು , ಬುಧವಾರ, 10 ಜನವರಿ 2018 (14:22 IST)
ನಗರದ ಕುಮಾರಕೃಪ ಅತಿಥಿ ಗೃಹದಲ್ಲಿ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಅವರನ್ನು ಭೇಟಿ ಮಾಡಲು ಹೋಗಿದ್ದ ಸಚಿವ ಯು.ಟಿ.ಖಾದರ್ ಕಕ್ಕಾಬಿಕ್ಕುಯಾಗಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಇಬ್ಬರೂ ಕುಮಾರಕೃಪ ಅತಿಥಿ ಗೃಹದಲ್ಲೇ ವಾಸ್ತವ್ಯ ಹೂಡಿದ್ದಾರೆ. ನೆಲಮಹಡಿಯಲ್ಲಿ ಅಮಿತ್ ಶಾ ಹಾಗೂ ಮೇಲಿನ ಮಹಡಿಯಲ್ಲಿ ವೇಣುಗೋಪಾಲ್ ಇದ್ದಾರೆ. ಆದರೆ, ವೇಣುಗೋಪಾಲ್ ಅವರನ್ನು ಭೇಟಿ ಮಾಡಲು ತೆರಳಿದ್ದ ಯು.ಟಿ.ಖಾದರ್ ಅವರು ಅಮಿತ್ ಶಾ ರೂಮಿನ ಬಳಿ ಹೋಗಿ, ಅಮಿತ್ ಇರುವುದು ತಿಳಿದು ವಾಪಸ್ ತೆರಳಿದ್ದಾರೆ.
 
ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಒಂದೇ ಅತಿಥಿ ಗೃಹದಲ್ಲಿ ಉಳಿದುಕೊಂಡಿರುವುದರಿಂದ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ಭೇಟಿ ಮಾಡಲು ಬರುವವರಿಗೆ ತೊಂದರೆಯಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಪರ ಪ್ರಚಾರ ನಡೆಸಲು ಬಂದಿದೆ ಐದು ರಾಜ್ಯಗಳಿಂದ 40 ಮಂದಿಯ ತಂಡ