Select Your Language

Notifications

webdunia
webdunia
webdunia
webdunia

ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣ; ತನಿಖೆ ನಡೆಸಲು ಸಿಸಿಬಿ ನೇತೃತ್ವದ 7 ತಂಡಗಳ ರಚನೆ

ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣ; ತನಿಖೆ ನಡೆಸಲು ಸಿಸಿಬಿ ನೇತೃತ್ವದ 7 ತಂಡಗಳ ರಚನೆ
ಬೆಂಗಳೂರು , ಶುಕ್ರವಾರ, 14 ಆಗಸ್ಟ್ 2020 (11:08 IST)
ಬೆಂಗಳೂರು : ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಪ್ರಕರಣದ ತನಿಖೆ ನಡೆಸಲು ಸಿಸಿಬಿ ನೇತೃತ್ವದ 7 ತಂಡಗಳಿಂದ ತನಿಖೆ ನಡೆಸಲಾಗಿವುದು.

ತನಿಖೆ ಮೇಲ್ವಿಚಾರಣೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೆಗಲಿಗೆ ಹಾಕಲಾಗಿದ್ದು., ತನಿಖಾ ಆಯಾಮದ ಬಗ್ಗೆ ಅವರು ನಿಗಾ ಇಡಲಿದ್ದಾರೆ ಎನ್ನಲಾಗಿದೆ. ತನಿಖೆಗೆ ಸಿಸಿಬಿ ಇಬ್ಬರು ಡಿಸಿಪಿಗಳ ನಿಯೋಜನೆ ಮಾಡಲಾಗಿದೆ. ಡಿಸಿಪಿ ಕುಲದೀಪ್ ಕುಮಾರ್ ಜೈನ್, ರವಿಕುಮಾರ್ ಅವರನ್ನು ನೇಮಿಸಲಾಗಿದೆ.

7 ತಂಡಕ್ಕೂ ಪ್ರತ್ಯೇಕ ಜವಾಬ್ದಾರಿ ನಿಯೋಜನೆ ಮಾಡಲಾಗಿದೆ.  ಈಗಾಗಲೇ ಗಲಭೆ, ಗೋಲಿಬಾರ್ ಕೇಸ್ ತನಿಖೆ ನಡೆಸಲಾಗುತ್ತಿದ್ದು, ಇದೀಗ ಸಿಸಿಬಿ ಪ್ರಕರಣದ ತನಿಖೆ ಆರಂಭಿಸಿದೆ ಎನ್ನಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಗಲಭೆ: ಮಾಜಿ ಸಚಿವ ಕೆಜೆ ಜಾರ್ಜ್ ಸಹಾಯಕನ ಬಂಧನ