Select Your Language

Notifications

webdunia
webdunia
webdunia
webdunia

ಇಂದಿರಾ ಕ್ಯಾಂಟೀನ್ ಗೆ ಕೆಂಪೇಗೌಡರ ಹೆಸರು; ಇದು ಮತ ಬ್ಯಾಂಕ್ ಗಟ್ಟಿಗೊಳಿಸಲು ಸರ್ಕಾರದ ಗಿಮಿಕ್ ಎಂದ ರೇವಣ್ಣ

ಇಂದಿರಾ ಕ್ಯಾಂಟೀನ್ ಗೆ ಕೆಂಪೇಗೌಡರ ಹೆಸರು; ಇದು ಮತ ಬ್ಯಾಂಕ್ ಗಟ್ಟಿಗೊಳಿಸಲು  ಸರ್ಕಾರದ ಗಿಮಿಕ್ ಎಂದ ರೇವಣ್ಣ
ಬೆಂಗಳೂರು , ಭಾನುವಾರ, 17 ನವೆಂಬರ್ 2019 (10:46 IST)
ಬೆಂಗಳೂರು : ಇಂದಿರಾ ಕ್ಯಾಂಟೀನ್ ಗೆ ನಾಡಪ್ರಭು ಕೆಂಪೇಗೌಡರ ಹೆಸರಿಡುವ ವಿಚಾರಕ್ಕೆ  ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.




ಇಂದಿರಾ ಕ್ಯಾಂಟೀನ್ ಗೆ ನಾಡಪ್ರಭು ಕೆಂಪೇಗೌಡರ ಹೆಸರಿಡುವ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಿದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಈ ಬಗ್ಗೆ ಕಿಡಿಕಾರಿದ ರೇವಣ್ಣ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ‍್ಳಲು ಸರ್ಕಾರ ಹೊರಟಿದೆ ಎಂದು  ತಿರುಗೇಟು ನೀಡಿದ್ದಾರೆ.


ಕೆಂಪೇಗೌಡರ ಕ್ಯಾಂಟೀನ್ ಇಟ್ಟರೂ ಒಳ್ಳೆಯದು. ಹಾಗೇ ನಮ್ಮ ಆದಿಚುಂಚನಗಿರಿ ಶ್ರೀಗಳ ಹೆಸರಿನಲ್ಲೂ ಒಂದು ಕ್ಯಾಟೀನ್ ತೆರೆಯಲಿ. ಎಲ್ಲೆಲ್ಲಿ ಯಾವ ಸಮುದಾಯದವರು ಹೆಚ್ಚಿದ್ದಾರೋ ಅಲ್ಲಿ ಅವರ ನಾಯಕರ ಹೆಸರಿನಲ್ಲಿ  ಕ್ಯಾಟೀನ್ ತೆರೆಯಲಿ ಎಂದು ಸಲಹೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಸುದ್ದಿಗೋಷ್ಠಿ ನಡೆಸಿ ಚುನಾವಣೆಗೆ ಸ್ಪರ್ಧಿಸುವ ಕುರಿತು ನಿರ್ಧಾರ ಕೈಗೊಳ್ಳಲಿರುವ ರೋಷನ್ ಬೇಗ್