Karnataka Weather: ಇಂದು ಭಾರೀ ಕುಸಿತ ಕಾಣಲಿದೆ ತಾಪಮಾನ, ಎಚ್ಚರ

Krishnaveni K
ಗುರುವಾರ, 18 ಡಿಸೆಂಬರ್ 2025 (08:40 IST)
ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಕನಿಷ್ಠ ತಾಪಮಾನ ಕೆಲವೆಡೆ ದಾಖಲೆಯ ಮಟ್ಟಕ್ಕೆ ತಲುಪಿದೆ. ಇಂದಂತೂ ವಿಪರೀತ ಚಳಿಯ ವಾತಾವರಣವಿರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.

ನಿನ್ನೆ ಕೆಲವೆಡೆ ಚಳಿಯ ಜೊತೆಗೆ ತುಂತುರು ಮಳೆಯೂ ಕಂಡುಬಂದಿತ್ತು. ಇಂದು ಮಳೆಯ ಸಾಧ್ಯತೆಯಿಲ್ಲ. ಆದರೆ ರಾಜ್ಯದ ಸರಾಸರಿ ಕನಿಷ್ಠ ತಾಪಮಾನವಂತೂ 15 ಡಿಗ್ರಿಗೆ ಕುಸಿಯಲಿದೆ. ವಿಶೇಷವೆಂದರೆ ಕರಾವಳಿ ಜಿಲ್ಲೆಗಳಲ್ಲೂ ವಿಪರೀತ ಚಳಿ ಕಂಡುಬರುತ್ತಿದೆ.

ಚಿಕ್ಕಮಗಳೂರು, ಕೊಡಗು, ಹಾಸನ, ರಾಮನಗರ, ಬೆಂಗಳೂರು, ಬೀದರ್, ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಇಂದು ಕನಿಷ್ಠ ತಾಪಮಾನ 12-14 ಡಿಗ್ರಿಯೊಳಗಿರಲಿದೆ. ಈ ಜಿಲ್ಲೆಗಳಲ್ಲಿ ವಿಪರೀತ ಚಳಿಯ ಜೊತೆ ಮೋಡ ಕವಿದ ವಾತಾವರಣವೂ ಕಂಡುಬರಲಿದೆ.

ಉಳಿದಂತೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿಲಿದ್ದರೂ ಚಳಿಯೂ ಹೆಚ್ಚಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಇಂದು ಕನಿಷ್ಠ ತಾಪಮಾನ 15-16 ಡಿಗ್ರಿಯೊಳಗಿರಲಿದೆ. ವಾರಂತ್ಯಕ್ಕೆ ಇನ್ನಷ್ಟು ಚಳಿ ನಿರೀಕ್ಷಿಸಲಾಗಿದೆ. ಇಂದು ರಾಜ್ಯದ ಗರಿಷ್ಠ ತಾಪಮಾನ ಸರಾಸರಿ 27 ಡಿಗ್ರಿಯಷ್ಟಿರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚೂರಿ ಇರಿತಕ್ಕೊಳಗಾದ ರೀತಿಯಲ್ಲಿ ಶವಪತ್ತೆ ಪ್ರಕರಣ, ಮೂವರು ಅರೆಸ್ಟ್‌

ಗಲ್ಫ್ ಆಫ್ ಓಮನ್‌ನಲ್ಲಿ ತೈಲ ಟ್ಯಾಂಕರ್ ಮೇಲೆ ದಾಳಿ, ಭಾರತೀಯ ಪ್ರಜೆ ಸಾವು

ರೇಷ್ಮೆ ಕಾರ್ಖಾನೆ ಮುಚ್ಚುವ ಬಿಜೆಪಿ ಆರೋಪ ಬಗ್ಗೆ ಎಚ್‌ಸಿ ಮಹದೇವಪ್ಪ ಪ್ರತಿಕ್ರಿಯೆ

ಇದೇ 3ರಂದು ಗಲ್ಫ್‌ ರಾಷ್ಟ್ರಗಳ ಕಡೆ ವಿಮಾನ ಪ್ರಯಾಣ ಮಾಡಲಿರುವವರು ಈ ಸುದ್ದಿ ಓದಲೇ ಬೇಕು

ಪಶ್ಚಿಮ ಬಂಗಾಳ ಪರಿವರ್ಷತೆನೆ ಸಿದ್ಧವಾಗಿದೆ: ರಾಜನಾಥ್ ಸಿಂಗ್‌

ಮುಂದಿನ ಸುದ್ದಿ
Show comments