Select Your Language

Notifications

webdunia
webdunia
webdunia
webdunia

Karnataka Weather: ರಾಜ್ಯದಲ್ಲಿ ಇಂದೂ ಒಣಹವೆ ಮುಂದುವರಿಕೆ

Karnataka Rains
ಬೆಂಗಳೂರು: ಕರ್ನಾಟಕದಲ್ಲಿ ಈಗ ಬೇಸಿಗೆಯ ಬೇಗೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂದು ಎಲ್ಲಾ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಇಂದಿನ ಹವಾಮಾನ ವರದಿ ಇಲ್ಲಿದೆ ನೋಡಿ.

ರಾಜ್ಯದಲ್ಲಿ ಈಗ ಬೇಸಿಗೆಯ ತಾಪ ಆವರಿಸಿಕೊಂಡಿದೆ. ಹಗಲಿಡೀ ವಿಪರೀತ ಬಿಸಿಲು ಕಂಡುಬರುತ್ತಿದೆ. ಸದ್ಯಕ್ಕೆ ಎಲ್ಲೂ ಮಳೆಯ ಸೂಚನೆಯಂತೂ ಅಲ್ಲ. ಇಂದೂ ಇದೇ ರೀತಿಯ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.

ಆದರೆ ನಿನ್ನೆಗೆ ಹೋಲಿಸಿದರೆ ಇಂದು ಗರಿಷ್ಠ ತಾಪಮಾನದಲ್ಲಿ ಕೊಂಚ ಇಳಿಕೆಯಾಗಲಿದೆ. ನಿನ್ನೆ ಗರಿಷ್ಠ ತಾಪಮಾನ ಸರಾಸರಿ 32 ಡಿಗ್ರಿಯಷ್ಟಿತ್ತು. ಇಂದು ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 30 ಡಿಗ್ರಿ, ಸರಾಸರಿ ಕನಿಷ್ಠ ತಾಪಮಾನ 17 ಡಿಗ್ರಿಯಷ್ಟು ಕಂಡುಬರಲಿದೆ.

ವಿಶೇಷವಾಗಿ ಕಲಬುರಗಿ, ದಕ್ಷಿಣ ಕನ್ನಡ, ಯಾದಗಿರಿ ಜಿಲ್ಲೆಯಲ್ಲಿ 36 ಡಿಗ್ರಿಯಷ್ಟು ಗರಿಷ್ಠ ತಾಪಮಾನ ಕಂಡುಬರಲಿದೆ. ಉಳಿದಂತೆ ರಾಯಚೂರು, ಬೀದರ್, ಬಳ್ಳಾರಿ, ಉತ್ತರ ಕನ್ನಡ, ಹುಬ್ಬಳ್ಳಿ, ಧಾರವಾಡ, ತುಮಕೂರು, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 34-35 ಡಿಗ್ರಿಯಷ್ಟು ಕಂಡುಬರುವುದು. ಉಳಿದ ಜಿಲ್ಲೆಗಳಲ್ಲಿ 30-32 ಡಿಗ್ರಿಯಷ್ಟು ಇರುವ ಸಾಧ್ಯತೆಯಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಸ್ರೇಲ್, ಇರಾನ್ ಗೆ ಪ್ರಧಾನಿ ಮೋದಿ ಒಂದು ಕರೆ ಮಾಡಿದ್ರೆ ಸಾಕು ಸಮಸ್ಯೆ ಪರಿಹಾರ: ಯುಎಇ ರಾಯಭಾರಿ