Select Your Language

Notifications

webdunia
webdunia
webdunia
webdunia

Karnataka weather: ವಾರಂತ್ಯಕ್ಕೆ ಹೇಗಿರಲಿದೆ ಕರ್ನಾಟಕದ ಹವಾಮಾನ

Karnataka Rains
ಬೆಂಗಳೂರು: ರಾಜ್ಯದಲ್ಲಿ ಈಗ ಬಿರು ಬಿಸಿಲು ಜನರನ್ನು ಹೈರಾಣಾಗಿಸಿದೆ. ಈ ವಾರಂತ್ಯಕ್ಕೆ ರಾಜ್ಯದಲ್ಲಿ ಮಳೆ ಸೂಚನೆಯಿದೆಯೇ, ಹೇಗಿರಲಿದೆ ಹವಾಮಾನ ಇಲ್ಲಿದೆ ವರದಿ.

ರಾಜ್ಯದಲ್ಲಿ ಪ್ರಸ್ತುತ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು  ಹೊರಗೆ ಕಾಲಿಡಲಾಗದಷ್ಟು ಬಿಸಿಲಿನ ವಾತಾವರಣವಿದೆ. ಬೆಳಿಗ್ಗೆ 10 ರಿಂದ ಸಂಜೆ 3 ರವರೆಗೆ ಹೊರಗೆ ಕಾಲಿಡದಿರುವುದೇ ಸೂಕ್ತ ಎನ್ನುವಂತಹ ವಾತಾವರಣವಿದೆ.

ಈ ವಾರ ಎಲ್ಲೂ ಮಳೆಯಾಗಿರಲಿಲ್ಲ. ವಾರಂತ್ಯದಲ್ಲೂ ಯಾವುದೇ ಜಿಲ್ಲೆಗೆ ಮಳೆಯ ಸೂಚನೆಯಿಲ್ಲ. ಬದಲಾಗಿ ಈ ವಾರಂತ್ಯಕ್ಕೆ ಮತ್ತಷ್ಟು ಬಿಸಿಲು ಕಂಡುಬರಲಿದೆ. ವಾರಂತ್ಯಕ್ಕೆ ರಾಜ್ಯದ ಗರಿಷ್ಠ ತಾಪಮಾನ ಸರಾಸರಿ 33 ಡಿಗ್ರಿಯಷ್ಟು ಕಂಡುಬರಲಿದ್ದು ಕನಿಷ್ಠ ತಾಪಮಾನ 19 ಡಿಗ್ರಿ ಆಸುಪಾಸಿನಲ್ಲಿರಲಿದೆ. ಈ ವಾರವಿಡೀ ಇದೇ ವಾತಾವರಣವಿತ್ತು.

ರಾಯಚೂರು, ಬಳ್ಳಾರಿ, ಕಲಬುರಗಿ, ಉತ್ತರ ಕನ್ನಡ, ಹುಬ್ಬಳ್ಳಿ, ಧಾರವಾಡ, ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ತಲುಪಲಿದೆ. ಉಳಿದ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 33-35 ಡಿಗ್ರಿಯ ಆಸುಪಾಸಿನಲ್ಲಿರಲಿದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಶುಭ್ರ ಆಕಾಶವಿರಲಿದ್ದು ಹಗಲಿಡೀ ಬಿಸಿಲು ಕಂಡುಬರುವುದು.


Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಲ ಝಳ ಹೆಚ್ಚಳ: ನೀರಿನ ಸಮಸ್ಯೆಯಾಗದಂತೆ ಕ್ರಮಕ್ಕೆ ಉಡುಪಿ ಡಿಸಿ ಸೂಚನೆ