Webdunia - Bharat's app for daily news and videos

Install App

ದೀಪಾವಳಿಗೆ ಖಾಸಗಿ ಬಸ್ ದರದ ಬಗ್ಗೆ ಎಚ್ಚರಿಕೆ ನೀಡಿದ ಸರ್ಕಾರ: ಕೆಎಸ್ಆರ್ ಟಿಸಿ ಬಸ್ ದರವೂ ಏನೂ ಕಮ್ಮಿಯಲ್ಲ

Krishnaveni K
ಶನಿವಾರ, 26 ಅಕ್ಟೋಬರ್ 2024 (08:22 IST)
ಬೆಂಗಳೂರು: ಈ ವಾರಂತ್ಯದಲ್ಲಿ ಬಸ್ ಪ್ರಯಾಣ ಭಾರೀ ದುಬಾರಿ. ದೀಪಾವಳಿ ಹಬ್ಬ ನಿಮಿತ್ತ ಸಾಲು ಸಾಲು ರಜೆಯಿರುವುದರಿಂದ ಬಸ್ ಗಳ ದರ ಗಗನಕ್ಕೇರಿದೆ.

ಬೆಂಗಳೂರಿನಿಂದ ಅನೇಕರು ತಮ್ಮ ಊರಿನ ಕಡೆ ಪ್ರಯಾಣ ಬೆಳೆಸುತ್ತಾರೆ. ಆದರೆ ಬಸ್ ಬುಕ್ ಮಾಡಲು ಹೋದರೆ ಅದರ ದರ ನೋಡಿಯೇ ಶಾಕ್ ಆಗುತ್ತಿದ್ದಾರೆ. ಸಾಲು ಸಾಲು ರಜೆಯಿದ್ದಾಗ ಖಾಸಗಿ ಬಸ್ ಗಳು ಅಕ್ಷರಶಃ ಲೂಟಿ ಮಾಡುತ್ತವೆ. ಹೀಗಾಗಿ ರಾಜ್ಯ ಸರ್ಕಾರ ಮೊದಲೇ ಖಾಸಗಿ ಬಸ್ ಗಳಿಗೆ ದರ ಮಿತಿಮೀರಿ ಹೆಚ್ಚಿಸದಂತೆ ಎಚ್ಚರಿಕೆ ನೀಡಿದೆ.

ಒಂದು ವೇಳೆ ಮಿತಿ ಮೀರಿ ದರ ನಿಗದಿಪಡಿಸಿದರೆ ಬಸ್ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ ನೀಡಿದೆ. ಖಾಸಗಿ ಬಸ್ ಗಳು ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡುವುದು ಕಂಡರೆ ಸಾರ್ವಜನಿಕರು 9449863429 ಅಥವಾ 9449863426 ಸಂಖ್ಯೆಗೆ ಕರೆ ಮಾಡಿ ದೂರು ನೀಡಲು ಸೂಚಿಸಿದೆ.

ಆದರೆ ಖಾಸಗಿ ಬಸ್ ಗಳಿಗೆ ಎಚ್ಚರಿಕೆ ನೀಡಿರುವ ಸರ್ಕಾರ ಕೆಎಸ್ಆರ್ ಟಿಸಿ ಬಸ್ ದರದ ಕಡೆಗೂ ಗಮನ ಹರಿಸಿದರೆ ಒಳಿತು ಎಂಬ ಮಾತು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಸಾಮಾನ್ಯವಾಗಿ 800 ರೂ. ದರ ಇರುವ ಟಿಕೆಟ್ ದರ 1,000 ರೂ. ಗಡಿ ದಾಟಿದೆ. ಸರಿ ಸುಮಾರು 100-150 ರೂ.ಗಳಷ್ಟು ಟಿಕೆಟ್ ದರ ಹೆಚ್ಚಾಗಿದೆ. ಒಂದೆಡೆ ಬಸ್ ಗಳಲ್ಲಿ ಸೀಟ್ ಗಳಿಲ್ಲ. ಇದರ ನಡುವೆ ದುಬಾರಿ ದರ ಬೇರೆ. ಸ್ಪೆಷಲ್ ಬಸ್ ಗಳನ್ನು ಹಾಕಿದರೆ ಅದರ ದರ ಮತ್ತಷ್ಟು ಹೆಚ್ಚು. ಹೀಗಾಗಿ ದೀಪಾವಳಿಯನ್ನು ಊರಿಗೆ ತೆರಳದೇ ಇಲ್ಲಿಯೇ ಆಚರಿಸುವುದು ಉತ್ತಮ ಎನ್ನುತ್ತಿದ್ದಾರೆ ಸಾರ್ವಜನಿಕರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತವನ್ನು ನಿಂದಿಸಿದ ಡೊನಾಲ್ಡ್ ಟ್ರಂಪ್ ಮಾತು ಕೇಳಿದ್ರೆ ರೊಚ್ಚಿಗೇಳ್ತೀರಿ

ಗಾರ್ಡನ್ ಸಿಟಿಯನ್ನ ಜಿಹಾದಿ ಸಿಟಿ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ: ಆರ್ ಅಶೋಕ್

Gold Price: ಪರಿಶುದ್ಧ ಚಿನ್ನದ ದರ ಇಂದು ಮತ್ತೆ ಬಲು ದುಬಾರಿ

ರಷ್ಯಾ ಉಕ್ರೇನ್ ಯುದ್ಧವಾದರೂ ನಿಲ್ಲಬಹುದು ಕಾಂಗ್ರೆಸ್ ಜಗಳ ನಿಲ್ಲಲ್ಲ: ವಿಜಯೇಂದ್ರ ಟಾಂಗ್

ಸಕ್ಸಸ್ ಸಿಗಬೇಕೆಂದರೆ ಏನು ಮಾಡಬೇಕು, ಇನ್ಫೋಸಿಸ್ ನಾರಾಯಣ ಮೂರ್ತಿ ಸಲಹೆಯೇನು

ಮುಂದಿನ ಸುದ್ದಿ
Show comments