Webdunia - Bharat's app for daily news and videos

Install App

ಇಸ್ರೇಲ್ ಟ್ರಾವೆಲ್ಸ್ ಎಂಬ ಬಸ್ ಹೆಸರನ್ನು ಜೆರುಸಲೇಂ ಎಂದು ಬದಲಿಸಿದ ಮಾಲಿಕ: ಕಾರಣವೇನು ಗೊತ್ತಾ

Krishnaveni K
ಸೋಮವಾರ, 7 ಅಕ್ಟೋಬರ್ 2024 (14:02 IST)
ಮಂಗಳೂರು: ಇಸ್ರೇಲ್ ಟ್ರಾವೆಲ್ಸ್ ಎಂದು ಹೆಸರಿಟ್ಟುಕೊಂಡಿದ್ದ ಬಸ್ ಮಾಲಿಕ ಸೋಷಿಯಲ್ ಮೀಡಿಯಾ ಬೆದಿಕೆಗೆ ಜಗ್ಗಿ ಜೆರುಸಲೇಂ ಎಂದು ಹೆಸರು ಬದಲಾಯಿಸಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
 

ಮೂಡಬಿದಿರೆ-ಕಿನಿಗೋಳಿ-ಕಟೀಲು-ಮುಲ್ಕಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ ಹೆಸರನ್ನು ಮಾಲಿಕ ಇಸ್ರೇಲ್ ಟ್ರಾವೆಲ್ಸ್ ಎಂದು ಇಟ್ಟುಕೊಂಡಿದ್ದ. ಆದರೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ದೂರು ನೀಡುವುದಾಗಿ ಬೆದರಿಕೆ ಬಂದಿತ್ತು.

ಇದರ ಬೆನ್ನಲ್ಲೇ ಮಾಲಿಕ ಬಸ್ ಹೆಸರನ್ನು ಜೆರುಸಲೇಂ ಟ್ರಾವೆಲ್ಸ್ ಎಂದು ಬದಲಾಯಿಸಿಕೊಂಡಿದ್ದಾನೆ. 12 ವರ್ಷಗಳಿಂದ ಇದೇ ರೂಟ್ ನಲ್ಲಿ ಬಸ್ ಮಾಲಿಕ ಬಸ್ ಓಡಿಸುತ್ತಿದ್ದ. ಇತ್ತೀಚೆಗೆ ಆತ ಈ ರೂಟ್ ನಲ್ಲಿ ಓಡಾಡುತ್ತಿದ್ದ ಹಳೆಯ ಬಸ್ ಒಂದನ್ನು ಖರೀದಿಸಿ ಇಸ್ರೇಲ್ ಟ್ರಾವೆಲ್ಸ್ ಎಂದು ಹೆಸರಿಟ್ಟಿದ್ದ.

ಇದೀಗ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಸಂಘರ್ಷ ಹೆಚ್ಚಿರುವುದರಿಂದ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಆತನಿಗೆ ಬಸ್ ಗೆ ಇಸ್ರೇಲ್ ಎಂದು ಹೆಸರಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಜನ ಆಕ್ರೋಶ ಬಂದ ಬೆನ್ನಲ್ಲೇ ಬಸ್ ಹೆಸರು ಬದಲಾಯಿಸಲು ತೀರ್ಮಾನಿಸಿದೆ. ಜನಕ್ಕೆ ಈ ಹೆಸರಿನ ಮೇಲೆ ಯಾಕೆ ಆಕ್ಷೇಪ ಎಂದು ಗೊತ್ತಾಗಲಿಲ್ಲ ಎಂದಿದ್ದಾರೆ.

ಇಸ್ರೇಲ್ ಮೇಲೆ ಮಾಲಿಕನಿಗೆ ಯಾಕೆ ಪ್ರೀತಿ?
ಅಷ್ಟಕ್ಕೂ ಈ ಬಸ್ ಮಾಲಿಕನಿಗೆ ಇಸ್ರೇಲ್ ಮೇಲೆ ಯಾಕೆ ಪ್ರೀತಿ ಎಂದು ನೀವು ಕೇಳಬಹುದು. ಅದಕ್ಕೂ ಆತ ಕಾರಣ ನೀಡಿದ್ದಾನೆ. ಇಸ್ರೇಲ್ ನನಗೆ ಜೀವನ ನೀಡಿದೆ. ಇದೇ ದೇಶದಲ್ಲಿ ಜೆರುಸಲೇಂ ಎಂಬ ಪವಿತ್ರ ಭೂಮಿಯಿರುವುದು. ಇಸ್ರೇಲ್ ನ ವ್ಯವಸ್ಥೆ ನನಗೆ ತುಂಬಾ ಇಷ್ಟ. ಆದರೆ ಈಗ ಸೋಷಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ್ದರಿಂದ ಯಾರಿಗೂ ನೋವಾಗಬಾರದು ಎಂಬ ಉದ್ದೇಶಕ್ಕೆ ಬಸ್ ಹೆಸರನ್ನು ಬದಲಾಯಿಸಿದೆ ಎಂದಿದ್ದಾರೆ. ಬಸ್ ಮಾಲಿಕ ಮೊದಲು ಇಸ್ರೇಲ್ ನಲ್ಲೇ ಕೆಲಸ ಮಾಡುತ್ತಿದ್ದರು. ಈಗ ಕಟೀಲ್ ನಲ್ಲಿ ನೆಲೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿ ವಿರುದ್ಧ ಬಿಜೆಪಿ ದೂರು

ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಬಿಜೆಪಿ ಗೂಂಡಾಗಳೇ ಕಾರಣ: ಕಾಂಗ್ರೆಸ್ ನಾಯಕ ಎಂ ಲಕ್ಷ್ಮಣ್

Viral Video, ಬೆಂಗಳೂರು ಮಹಿಳೆಗೆ ಕಪಾಳಮೋಕ್ಷ ಮಾಡಿದ ರಾಪಿಡೋ ಚಾಲಕ: ಕಾರಣ ಇಲ್ಲಿದೆ

ದೆಹಲಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಹಾಂಗ್‌ಕಾಂಗ್‌ನಲ್ಲಿ ಲ್ಯಾಂಡಿಂಗ್‌

ರಾಜ ರಘುವಂಶಿ ಹತ್ಯೆಯಾಗುವ ಮುನ್ನ ಪತ್ನಿ ಸೋನಂ ಜೊತೆಗಿದ್ದ ವಿಡಿಯೋ ವೈರಲ್

ಮುಂದಿನ ಸುದ್ದಿ
Show comments