Publish Date: Fri, 06 Mar 2026 (10:47 IST)
Updated Date: Fri, 06 Mar 2026 (10:49 IST)
ಬೆಂಗಳೂರು: ಈ ಸಾಲಿನ ಬಜೆಟ್ ಮಂಡನೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಯಾವ ಗ್ಯಾರಂಟಿ ಯೋಜನೆಗೆ ಎಷ್ಟು ಹಣ ಮೀಸಲಿಟ್ಟಿದ್ದಾರೆ ಇಲ್ಲಿದೆ ಲೆಕ್ಕ.
ಬಜೆಟ್ ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಅನುದಾನ ಮೀಸಲಟ್ಟಿದೆ. ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿಯೋಜನೆಗೆ ಅನುದಾನ ಮೀಸಲಿಟ್ಟಿರುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಈ ಪೈಕಿ ಉಚಿತ ಬಸ್ ಸೇವೆ ಒದಗಿಸುವ ಶಕ್ತಿ ಯೋಜನೆಗೆ 5,300 ಕೋಟಿ, ಗೃಹಿಣಿಯರಿಗೆ 2,000 ರೂ. ನೀಡುವ ಗೃಹಲಕ್ಷ್ಮಿಗೆ 28608 ಕೋಟಿ ರೂ, ಉಚಿತ ವಿದ್ಯುತ್ ಯೋಜನೆಗೆ ಗೃಹ ಜ್ಯೋತಿಗೆ 10,578 ಕೋಟಿ ರೂ., ಅನ್ನಭಾಗ್ಯ ಅಥವಾ ಇಂದಿರಾ ಆಹಾರ ಕಿಟ್ ಗೆ 6,200 ಕೋಟಿ ರೂ., ಅನುದಾನ ನೀಡಲಾಗಿದೆ.