ಕರ್ನಾಟಕ ಬ್ರ್ಯಾಂಡ್‌ ನಂದಿನಿಯ ಯಾವೆಲ್ಲ ಉತ್ಪನ್ನಗಳು ನಾಳೆಯಿಂದ ಅಗ್ಗ: ಇಲ್ಲಿದೆ ಮಾಹಿತಿ

Sampriya
ಭಾನುವಾರ, 21 ಸೆಪ್ಟಂಬರ್ 2025 (10:32 IST)
Photo Credit X
ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಳಿಕೆಯ ಪರಿಣಾಮ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿಯ (ಕೆಎಂಎಫ್‌) ತುಪ್ಪ, ಬೆಣ್ಣೆ, ಪನೀರ್ ಸೇರಿ ನಂದಿನಿ ಹಾಲಿನ 20 ಉತ್ಪನ್ನಗಳು ನಾಳೆಯಿಂದ ಅಗ್ಗವಾಗಲಿದೆ. ಇದೇ 22ರಿಂದಲೇ ಪರಿಷ್ಕೃತ ದರ ಅನ್ವಯ ಆಗಲಿದೆ.  

ಜಿಎಸ್‌ಟಿ ಇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವಾಲಯದ ಆದೇಶದ ಅನ್ವಯ, ಆಡಳಿತ ಮಂಡಳಿ ಸಭೆ ನಡೆಸಿ ಹಾಲಿನ ಉತ್ಪನ್ನಗಳ ಮೇಲಿನ ದರ ಪರಿಷ್ಕರಿಸಲಾಗಿದೆ. 

ನಂದಿನಿ ತುಪ್ಪ, ಬೆಣ್ಣೆ, ಚೀಸ್, ಕುರುಕು ತಿಂಡಿಗಳ ಮೇಲಿನ ಜಿಎಸ್‌ಟಿ ಶೇ 12ರಿಂದ ಶೇ 5ಕ್ಕೆ, ಕುಕೀಸ್, ಚಾಕೋಲೇಟ್ಸ್, ಐಸ್‌ಕ್ರೀಂ, ಇನ್‌ಸ್ಟಂಟ್ ಮಿಕ್ಸ್ ಮತ್ತು ಪ್ಯಾಕ್ಡ್‌ ನೀರಿನ ಮೇಲಿನ ಜಿಎಸ್‌ಟಿ ಶೇ 18ರಿಂದ ಶೇ 5ಕ್ಕೆ ಇಳಿಕೆಯಾಗಿದೆ. 

ನಂದಿನಿ ಪನೀರ್ ಮತ್ತು ಯುಎಚ್‌ಟಿ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಶೇ 5ರಿಂದ ಶೂನ್ಯಕ್ಕೆ ಇಳಿಕೆಯಾಗಿದೆ. ನಂದಿನಿ ಮೊಸರಿನ ಮೇಲಿನ ಜಿಎಸ್‌ಟಿ ಈ ಮೊದಲಿನಂತೆ ಶೇ 5 ರಷ್ಟು ಇರಲಿದೆ. ಆದ್ದರಿಂದ ಮೊಸರಿನ ದರದಲ್ಲಿ ವ್ಯತ್ಯಾಸವಾಗುವುದಿಲ್ಲ. ಹಾಲಿನ ದರವೂ ಈ ಮೊದಲಿನಂತೆ ಇರಲಿದೆ.

1 ಲೀಟರ್ ತುಪ್ಪದ ದರ ₹650ರಿಂದ ₹610ಕ್ಕೆ ಇಳಿಕೆ ಮಾಡಲಾಗಿದೆ. ಇದೇ ರೀತಿ, ಮೊಸರು ಹೊರತುಪಡಿಸಿ ಹಾಲಿನ ಇತರ ಉತ್ಪನ್ನಗಳ ದರ ಇಳಿಸಲಾಗಿದೆ. ಈಗಾಗಲೇ ಪೂರೈಕೆ ಆಗಿರುವ ಉತ್ಪನ್ನಗಳ ಮೇಲೆ ಹಳೆ ದರ ಇದ್ದರೂ, ಮಾರಾಟಗಾರರು ಕಡ್ಡಾಯವಾಗಿ ಪರಿಷ್ಕೃತ ದರವನ್ನೇ ಪಡೆಯಲು ಸೂಚಿಸಲಾಗಿದೆ.

ತುಪ್ಪ, ಬೆಣ್ಣೆ, ಪನ್ನೀರ್‌, ಗುಡ್‌ಲೈಫ್‌ ಹಾಲು, ಚೀಸ್‌, ಐಸ್‌ಕ್ರೀ, ಖಾರ ಉತ್ಪನ್ನ, ಕೇಕ್‌, ನಂದಿನಿ ನೀರು, ಪಾಯಸ, ಜಾಮೂನ್‌, ಕುಕ್ಕಿಸ್‌, ಬಾದಾಮ್‌ ಹಾಲಿನ ಪುಡಿ, ಮಫಿನ್‌, ಸ್ಪ್ಯಾಶ್‌ವೇ ಡ್ರಿಂಕ್‌, ರೈಸ್‌ ಕ್ರಿಪಿ ಮಿಲ್ಕ್‌ ಚಾಕೊ ಉತ್ಪನ್ನಗಳ ದರ ಇಳಿಸಲಾಗಿದೆ.

ನಂದಿನಿ ಹಾಲಿನ ಉತ್ಪನ್ನಗಳಿಗೆ ಸೋಮವಾರದಿಂದಲೇ ಪರಿಷ್ಕೃತ ದರ ಅನ್ವಯ ಆಗುತ್ತದೆ. ಮಾರಾಟಗಾರರು ಕಡ್ಡಾಯವಾಗಿ ಪರಿಷ್ಕೃತ ದರಕ್ಕೆ ಮಾರಾಟ ಮಾಡಬೇಕು ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಸೂಚಿಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇಂದ್ರದಿಂದಾಗುವ ಪರಿಹಾರಕ್ಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ರೆ ಹೇಗೆ

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಾಲಕಿ ಟೀ ಶರ್ಟ್‌ ಒಳಗಡೆ ಕೈ ಹಾಕಿ ವ್ಯಕ್ತಿಯಿಂದ ವಿಕೃತಿ, video

ಮನೆ ಬಿಟ್ಟು ಹೋದ ಪತ್ನಿ, ಮಗಳನ್ನು ಕೊಂದು, ವ್ಯಕ್ತಿ ಮಾಡಿದ್ದೇನು ಗೊತ್ತಾ

ರೈತನ ಕೊಂದು ತೊಡೆ, ತಲೆ ಭಾಗ ತಿಂದು ಹಾಕಿದ ಹುಲಿ, ಮೈಸೂರಿನಲ್ಲಿ ವ್ಯಾಘ್ರ ದಾಳಿಗೆ ಮೂರು ಬಲಿ

ದಿಢೀರನೇ ತುಮಕೂರು ಪ್ರವಾಸವನ್ನು ರದ್ದು ಮಾಡಿದ ಸಿಎಂ, ಇದೇ ಕಾರಣ

ಮುಂದಿನ ಸುದ್ದಿ
Show comments