Publish Date: Thu, 30 Dec 2021 (15:54 IST)
Updated Date: Thu, 30 Dec 2021 (16:57 IST)
ಕರ್ನಾಟಕ ಬಂದ್ ನಾಳೆ ಮಾಡೇ ಮಾಡುತ್ತೇವೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಂಇಎಸ್ ನಿಷೇಧ ಮಾಡಲೇಬೇಕು. ಹೀಗಾಗಿ ನಾಳೆ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಬಂದ್ ಮಾಡುತ್ತೇವೆ.
ನೂರಾರು ಕನ್ನಡ ಪರ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದ್ದು, ಇದು ಕನ್ನಡಿಗರ ಗೌರವದ ಪ್ರಶ್ನೆಯಾಗಿದೆ ಎಂದು ಹೇಳಿದರು. ನಾಳೆಯ ಕರ್ನಾಟಕ ಬಂದ್ ಸ್ವಾಭಿಮಾನದ ಬಂದ್, ಕನ್ನಡದ ಬಂದ್. ಬಂದ್ ನಲ್ಲಿ ರೈತರು, ಲಾರಿ ಮಾಲೀಕರು, ಕಾರು ಮಾಲೀಕರು, ಚಾಲಕರು ಸೇರಿದಂತೆ ಎಲ್ಲರೂ ಭಾಗವಹಿಸಬೇಕು ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ