Publish Date: Tue, 06 Dec 2022 (15:48 IST)
Updated Date: Tue, 06 Dec 2022 (15:53 IST)
ಅಮೃತೇಶ್ ಎಂಬ ಹಿಂದಿವಾಲ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿದ್ದಾನೆ. ಬೆಂಗಳೂರಿನ HSR ಲೇಔಟ್ನ ಪರಂಗಿಪಾಳ್ಯ ಬಳಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶ ಮೂಲದ ವ್ಯಕ್ತಿ ಅಮೃತೇಶ್ ಈ ಕೃತ್ಯ ನಡೆಸಿದ್ದಾನೆ. ಡಿಸೆಂಬರ್ 4ರ ರಾತ್ರಿ 10 ಗಂಟೆ ಸುಮಾರಿಗೆ ಧ್ವಜಕ್ಕೆ ಬೆಂಕಿ ಇಟ್ಟಿದ್ದಾನೆ. ಬೇಕರಿಯೊಂದರ ಬಳಿ ಅಮೃತೇಶ್ ಧ್ವಜಕ್ಕೆ ಬೆಂಕಿ ಇಟ್ಟು ವಿಕೃತಿ ಮೆರೆದಿದ್ದಾನೆ. ಸ್ಥಳದಲ್ಲಿದ್ದ ಸಾರ್ವಜನಿಕರು ಯುವಕನಿಗೆ ಪ್ರಶ್ನೆ ಮಾಡಿದ್ದಾರೆ. ಆಗ ಕನ್ನಡ ಬರಲ್ಲ ಅಂತ ದುರಹಂಕಾರದ ಮಾತನಾಡಿದ್ದಾನೆ. ಕೂಡಲೇ ಸ್ಥಳೀಯರು HSR ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕಳೆದ ಬಾರಿ ನನ್ನ ಸ್ನೇಹಿತರನ್ನ ಪೊಲೀಸ್ರು ಅರೆಸ್ಟ್ ಮಾಡಿದ್ರು. ಅದಕ್ಕಾಗಿ ನಾನು ಬಾವುಟ ಸುಟ್ಟು ಏಕಾಂಗಿಯಾಗಿ ಪ್ರೊಟೆಸ್ಟ್ ಮಾಡ್ತಿದ್ದೆ ಎಂದು ಹೇಳಿದ್ದಾನೆ. HSR ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.