Publish Date: Tue, 06 Dec 2022 (15:13 IST)
Updated Date: Tue, 06 Dec 2022 (15:22 IST)
ಬಹಳ ವರ್ಷದಿಂದ ಮಹಾರಾಷ್ಟ್ರದವರು ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮಾಡಿಕೊಂಡು ಬಂದಿದ್ದಾರೆ. ಕನ್ನಡಿಗರ ನಡುವೆ ಸಾಮರಸ್ಯ ಇದೆ. ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಇದೆ. ಅದನ್ನು ಗೆಲ್ಲುವ ವಿಶ್ವಾಸ ನಮಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆ ಮಾಡಲು ಸರ್ಕಾರ ಸಿದ್ದವಾಗಿದೆ ಎಂದು ತಿಳಿಸಿದರು. ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಪುಣ್ಯ ಸ್ಮರಣೆ. ಈ ಕುರಿತು ಮಾತನಾಡಿದ ಅವರು, ದೀರ್ಘ ಕಾಲ ಸಂವಿಧಾನಕ್ಕಾಗಿ ಹೋರಾಟ ಮಾಡಿದವರು ಡಾ.B.R. ಅಂಬೇಡ್ಕರ್. ಸಂವಿಧಾನ ಇಲ್ಲ ಎಂದಿದ್ದರೆ ಇವತ್ತು ನಾವು ಇಲ್ಲಿ ಇರ್ತಿಲಿಲ್ಲ ಎಂದ್ರು. ಸಂವಿಧಾನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿದ್ದಾರೆ. ಅದರ ಮೌಲ್ಯಗಳನ್ನು ನಾವು ಅಳಿಸವಡಿಸಿಕೊಳ್ಳಬೇಕು ಎಂದು ಕರೆ ಕೊಟ್ರು.