Select Your Language

Notifications

webdunia
webdunia
webdunia
webdunia

ಕೆ.ಹೆಚ್. ಮುನಿಯಪ್ಪ ಕಾಂಗ್ರೆಸ್ ಗೆ ಗುಡ್ ಬೈ ಬಗ್ಗೆ ಪ್ರತಿಕ್ರಿಯೆ

ಕೆ.ಹೆಚ್. ಮುನಿಯಪ್ಪ ಕಾಂಗ್ರೆಸ್ ಗೆ ಗುಡ್ ಬೈ ಬಗ್ಗೆ ಪ್ರತಿಕ್ರಿಯೆ
ಬೆಂಗಳೂರು , ಶನಿವಾರ, 2 ಜುಲೈ 2022 (16:30 IST)
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಹೆಚ್ ಮುನಿಯಪ್ಪ ( KH Muniyappa ) ಅವರು, ನಾನು ಕಾಂಗ್ರೆಸ್ ಪಕ್ಷದಿಂದ ದೂರುವಿದ್ದ ಮಾತ್ರಕ್ಕೆ ಪಕ್ಷ ಬಿಡುತ್ತಿದ್ದೇನೆ ಎಂಬುದು ಸುಳ್ಳು. ಬಿಜೆಪಿ ಪಕ್ಷವನ್ನು ಸೇರುತ್ತಿಲ್ಲ. ಕೋಲಾರದ ಜನತೆ ನನ್ನನ್ನು 30 ವರ್ಷ ಬೆಳೆಸಿದ್ದಾರೆ ಎಂದರು.
 
ವರ್ಗಾವಣೆ ನಿರೀಕ್ಷೆಯಲ್ಲಿದ್ದ 'ಸಾರಿಗೆ ನೌಕರ'ರಿಗೆ ಗುಡ್ ನ್ಯೂಸ್:
ನಾನು ಸೋತ ಕಾರಣಕ್ಕಾಗಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ರಮೇಶ್ ಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ನಾವಿರಬೇಕಾ ಅಥವಾ ಕೆ ಹೆಚ್ ಮುನಿಯಪ್ಪ ಇರಬೇಕಾ ಅಂತ ಹೇಳ್ತಾ ಇದ್ದಾರೆ. ಈ ಮೂಲಕ ಅವರು ಶಕುನಿ ಪಾತ್ರ ಮಾಡ್ತಾ ಇದ್ದಾರೆ. ಅವರಿಗೆ ಮುಂದೆ ಉತ್ತರಿಸೋದಾಗಿ ಹೇಳಿದರು.
 
ಪಾಂಡವರ ವನವಾಸ ಮುಗಿದಿದೆ. ಯುದ್ಧ ಆರಂಭವಾಗಲಿ ಏಕ ಪಾತ್ರಾಭಿನಯ ಮಾಡುತ್ತಿರುವ ರಮೇಶ್ ಕುಮಾರ್ ಗೆ ಸರಿಯಾಗಿ ಜನರು ಉತ್ತರ ನೀಡಲಿದ್ದಾರೆ. ಅವರ ಮಾತಿಗೆ ಯಾರೂ ಮರುಳಾಗೋದಿಲ್ಲ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಆಸ್ತಿ ಸಂಪಾದನೆ ಪೊಲೀಸಪ್ಪ ಜೈಲುಶಿಕ್ಷೆ