Webdunia - Bharat's app for daily news and videos

Install App

ಮದ್ಯದ ಬೆಲೆ ಕೇಳಿಯೇ ನಶೆ ಏರುವಂತಾಗಿದೆ: ಬಿಜೆಪಿ ವ್ಯಂಗ್ಯ

Sampriya
ಮಂಗಳವಾರ, 6 ಮೇ 2025 (19:07 IST)
ಬೆಂಗಳೂರು: ಗೋವಾ ರಾಜ್ಯದಲ್ಲಿ ₹100ಗೆ ಸಿಗುವ ಮದ್ಯಕ್ಕೆ ಕರ್ನಾಟಕದಲ್ಲಿ ₹305 ನೀಡಬೇಕು. ಮದ್ಯಪ್ರಿಯರಿಗೆ ಕಾಂಗ್ರೆಸ್ ಸರ್ಕಾರ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಇದೀಗ ಮದ್ಯದ ಬೆಲೆ ಕೇಳಿಯೇ ಬಡವರ್ಗದ ಮದ್ಯದ ಪ್ರಿಯರು ಅಮಲಿಗೊಳಗಾಗುತ್ತಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ.

ಈ ಬಗ್ಗೆ ಬಿಜೆಪಿ ಸರ್ಕಾರ್‌ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ, ಬರೆದುಕೊಂಡಿದೆ.

ಗ್ಯಾರಂಟಿಗಳಿಂದ ಕಂಗೆಟ್ಟಿರುವ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸಲು ಸಿದ್ದರಾಮಯ್ಯ
 ಸರ್ಕಾರ ಅಬಕಾರಿ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಮದ್ಯದ ಮೇಲೆ ವಿಪರೀತವಾಗಿ ಸುಂಕ ವಿಧಿಸುವ ಮೂಲಕ ಕಾಂಗ್ರೆಸ್ ಸರ್ಕಾರ

 ಮದ್ಯಪ್ರಿಯರಿಗೆ ಶಾಕ್‌ ಮೇಲೆ ಶಾಕ್‌ ನೀಡುತ್ತಿದೆ. ಮದ್ಯದ ದರ ಏರಿಕೆಯಿಂದಾಗಿ ಬೆಲೆ ಕೇಳಿಯೇ ಬಡವರ್ಗದ ಮದ್ಯಪ್ರಿಯರು ಅಮಲಿಗೊಳಗಾಗುತ್ತಿದ್ದಾರೆ.

ಗೋವಾ ರಾಜ್ಯದಲ್ಲಿ100 ರೂಪಾಯಿಗಳಿಗೆ ಸಿಗುವ ಮದ್ಯಕ್ಕೆ ಕರ್ನಾಟಕದಲ್ಲಿ ₹305 ವಿಧಿಸಲಾಗುತ್ತಿದೆ. ಮದ್ಯದ ಮೇಲೆ ಶೇ. 80 ರಷ್ಟು ತೆರಿಗೆ ವಿಧಿಸುವ ಮೂಲಕ ಇಡೀ ದೇಶದಲ್ಲಿ ಅತೀ ಹೆಚ್ಚು ತೆರಿಗೆ ವಿಧಿಸುವ ರಾಜ್ಯ ಎಂಬ ಕುಖ್ಯಾತಿಗೆ ಕರ್ನಾಟಕ ಪಾತ್ರವಾಗಿದೆ. ತನ್ನ ಗ್ಯಾರಂಟಿಗಳನ್ನು ಜಾರಿಯಲ್ಲಿರಿಸಲು ಅತೀ ಹೆಚ್ಚು ತೆರಿಗೆ ವಿಧಿಸಿದ್ದೇ ಹೊರತು ಇದು ಯಾವುದೇ ಜನಪರ ಕಾಳಜಿಯಿಂದಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮದ್ಯದ ಮೇಲಿನ ಬೆಲೆ  ಏರಿಕೆಯನ್ನು ಸಮರ್ಥಿಸುತ್ತಾ, ಮದ್ಯದ ದುಶ್ಚಟದಿಂದ ಜನರನ್ನು ವಿಮುಖರನ್ನಾಗಿಸಲು ಬೆಲೆ ಏರಿಕೆ ಮಾಡಿದ್ದೇವೆ ಎನ್ನುತ್ತಿದ್ದಾರೆ. ಅಷ್ಟು ಜನಪರ, ಬಡವರ ಬಗ್ಗೆ ಕಾಳಜಿ ಇದ್ದರೆ, ಮದ್ಯವನ್ನೇ ಸಂಪೂರ್ಣವಾಗಿ ನಿಷೇಧಿಸಬಹುದಲ್ಲವೇ?<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pahalgam Attack: ಪಾಕ್‌ ಸರ್ಕಾರದ ನಡೆಗೆ ಛೀಮಾರಿ ಹಾಕಿದ ಪಾಕಿಸ್ತಾನದ ಧರ್ಮಗುರು, Video Viral

Janardhan Reddy: ಶಿಕ್ಷೆ ಕಡಿಮೆ ಮಾಡಿ ಎಂದು ಅಂಗಲಾಚಿದ ಜನಾರ್ಧನ ರೆಡ್ಡಿಗೆ ಕೋರ್ಟ್ ಹೇಳಿದ್ದೇನು: ಇನ್ನು ಜೈಲೂಟ ಫಿಕ್ಸ್

ಪಹಲ್ಗಾಮ್ ಗೆ ಇಂಟೆಲಿಜೆನ್ಸ್ ವರದಿ ಪಡೆದು ಮೋದಿ ಹೋಗಿರಲಿಲ್ಲ, ಸಾಮಾನ್ಯರ ಕತೆಯೇನು: ಮಲ್ಲಿಕಾರ್ಜುನ ಖರ್ಗೆ

Pahalgam Terror Attack: ಪಾಕ್ ವಿರುದ್ಧ ಪ್ರತಿದಾಳಿಗೆ ಕೇಂದ್ರದಿಂದ ಭಾರೀ ಸಿದ್ಧತೆ

ಶಬರಿಮಲೆಗೆ ಭೇಟಿ ನೀಡುವ ಮೊದಲ ರಾಷ್ಟ್ರಪತಿಯಾಗಲಿದ್ದಾರೆ ದ್ರೌ‍ಪದಿ ಮುರ್ಮು, ಪಾದಯಾತ್ರೆ ಮೂಲಕ ಭೇಟಿ

ಮುಂದಿನ ಸುದ್ದಿ
Show comments