Select Your Language

Notifications

webdunia
webdunia
webdunia
webdunia

ಜಿಂದಾಲ್ ಪ್ರಕರಣ: ಬಿಜೆಪಿ ಪಾದಯಾತ್ರೆಗೆ ಶಾಮನೂರು ಕಿಡಿ

ಜಿಂದಾಲ್ ಪ್ರಕರಣ: ಬಿಜೆಪಿ ಪಾದಯಾತ್ರೆಗೆ ಶಾಮನೂರು ಕಿಡಿ
ದಾವಣಗೆರೆ , ಮಂಗಳವಾರ, 18 ಜೂನ್ 2019 (15:31 IST)
ಜಿಂದಾಲ್ ಕಂಪನಿಗೆ ಸರ್ಕಾರ ಭೂಮಿ ನೀಡಿಕೆ ವಿಚಾರವಾಗಿ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿದ್ದು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ದಾವಣಗೆರೆಯಲ್ಲಿ  ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ ನೀಡಿದ್ದು, ಜಿಂದಾಲ್ ಗೆ ಭೂಮಿ ನೀಡಬೇಕು ಎನ್ನುವ ವಿಷಯ ಇದು ಹಿಂದೆ ಬಿಜೆಪಿಯವರ ಕಾಲದಲ್ಲಿ ಆಗಿರೋದು. ಜೆಡಿಎಸ್ , ಕಾಂಗ್ರೆಸ್ ನವರು ಮಾಡಿರೋದಲ್ಲ. 
ಈ ಬಗ್ಗೆ ಪರಾಮರ್ಶೆಗೆ ಸಂಪುಟ ಉಪಸಮಿತಿ ರಚಿಸಲಾಗಿದೆ ಎಂದರು.  

ಉಪಸಮಿತಿಯಲ್ಲಿ ಎಲ್ಲರು ಹಿರಿಯರು ಇದ್ದಾರೆ. ಅವರೇ ಒಳ್ಳೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಇನ್ನು, ಜಿಂದಾಲ್ ಪ್ರಕರಣ ವಿರುದ್ಧ ಬಿಜೆಪಿ ಪಾದಯಾತ್ರೆ ನಡೆಸಲಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಬಿಜೆಪಿ ಪಾದಯಾತ್ರೆಗೆ  ಶಾಮನೂರು ಟೀಕೆ ಮಾಡಿದ್ದಾರೆ. ಅವರು ಪಾದಯಾತ್ರೆ ಮಾಡಲಿ. ಇದರಿಂದ ರೋಗವಾದ್ರು ದೂರವಾಗುತ್ತವೆ. ಹೀಗಂತ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಟೀಕೆ ಮಾಡಿದ್ದಾರೆ.  

 


Share this Story:

Follow Webdunia kannada

ಮುಂದಿನ ಸುದ್ದಿ

ದೇವರಿಗೆ ದಿಗ್ಬಂಧನ ಹಾಕಿದ ಜನರು!