Select Your Language

Notifications

webdunia
webdunia
webdunia
webdunia

ಸಂಸದೆ ಸುಮಲತಾ ವಿರುದ್ಧ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿ

ಸಂಸದೆ ಸುಮಲತಾ ವಿರುದ್ಧ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿ
ಮಂಡ್ಯ , ಬುಧವಾರ, 17 ಆಗಸ್ಟ್ 2022 (21:23 IST)
ಸಂಸದೆ ಸುಮಲತಾ ವಿರುದ್ಧ ಜೆಡಿಎಸ್‌ ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ಹೊರಹಾಕಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಮೊದಲು ಅವರು ಒಬ್ಬ ಚಿತ್ರ ನಟಿ. ಅವರ ಯಜಮಾನರು ತೀರಿಕೊಂಡ ನಂತರ ಚುನಾವಣೆಗೆ ನಿಂತಿದ್ದು ಯಾಕೆ..? ಕುಟುಂಬ ರಾಜಕಾರಣ ಅಂದ್ರೆ ಏನು..? ಕುಟುಂಬದ ಸದಸ್ಯರು ಚುನಾವಣೆಗೆ ನಿಂತರೆ ತಾನೇ ರಾಜಕಾರಣ ಪ್ರಾರಂಭ. ಅವರು ಚುನಾವಣೆಗೆ ನಿಂತ್ರಲ್ಲ, ಅವರು ಮಾಡಿದ್ದು ಏನು ಹಾಗಿದ್ರೆ.? ಎಂದು ಪ್ರಶ್ನಿಸಿದ್ದಾರೆ. ಇನ್ನು ಸುಮಲತಾ ಮಂಡ್ಯ ಜಿಲ್ಲೆಗೆ ಸ್ವಾತಂತ್ರ್ಯ ಕೊಡಿಸ್ತಾರಂತೆ. ಗೆದ್ದು ಮೂರು ವರ್ಷವಾದರೂ ಜಿಲ್ಲೆಗೆ ಅಭಿವೃದ್ಧಿ ತೋರಿಸಿಲ್ಲ. ಹಳ್ಳಿಗಳ ಕಡೆ ಅಭಿವೃದ್ಧಿ ಮಾಡಿಲ್ಲ. ಈಗ ಸ್ವಾತಂತ್ರ್ಯ ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ, ನಾಚಿಕೆ ಗೇಡು. ಅವರ ಮಾತಿನ ಬಗ್ಗೆ ಅವರಿಗೆ ಅರಿವಿಲ್ಲ ಎಂದು ಸುಮಲತಾ ವಿರುದ್ಧ ವ್ಯಂಗ್ಯವಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ