ಜೆಡಿಎಸ್ ಶಾಸಕನಿಂದ ಜಾತಿವಾರು ಗ್ರಾಮ ವಾಸ್ತವ್ಯ…!

Webdunia
ಶುಕ್ರವಾರ, 3 ಆಗಸ್ಟ್ 2018 (17:26 IST)
ರಾಜ್ಯದ ಕೆಲವು ಶಾಸಕರು ತಮ್ಮ  ಕ್ಷೇತ್ರದಲ್ಲಿನ  ಸಮಸ್ಯೆ ಅರಿಯಲು ಗ್ರಾಮ ವಾಸ್ತವ್ಯ ಮಾಡೋದು ಕಾಮನ್. ಆದ್ರೆ ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ಜಾತಿವಾರು ಗ್ರಾಮ ವಾಸ್ತವ್ಯ ಮಾಡ್ತಿದ್ದಾರೆ.

 
ರಾಜ್ಯದಲ್ಲಿ ಜನರಿಂದ ಆಯ್ಕೆಯಾಗಿರುವ ಶಾಸಕರು ಗ್ರಾಮ ವಾಸ್ತವ್ಯ ಮಾಡಿ ಜನ್ರ ಸಮಸ್ಯೆ ಕೇಳೋದು ಕಾಮನ್. ಆದ್ರಲ್ಲೂ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆದ ಮೇಲಂತೂ ಶಾಸಕರ ಗ್ರಾಮ ವಾಸ್ತವ್ಯ ಹೆಚ್ಚಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರದ ಶಾಸಕ ಅನ್ನದಾನಿ ಜಾತಿ ವಾರು ಗ್ರಾಮ ವಾಸ್ತವ್ಯ ಮಾಡ್ತಿದ್ದಾರೆ. ವಾರದ ಹಿಂದೆ ಹಲಗೂರು ಹೋಬಳಿಯ ಸಿದ್ದಯ್ಯನ ದೊಡ್ಡಿ ಗ್ರಾಮದ ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿದ್ರೆ, ಇವತ್ತು ಬೆಳಕವಾಡಿ ಬಳಿಯ ಐನೋರ ದೊಡ್ಡಿ ಗ್ರಾಮದ ಉಪ್ಪಾರರ ಮನೆಯಲ್ಲಿ ವಾಸ್ತವ್ಯ ಹೂಡಿದ್ದು, ಮುಂದಿನ ವಾರ ಮತ್ತೊಬ್ಬರ ಮನೆಯಲ್ಲಿ ವಾಸ್ತವ್ಯ ಮಾಡೋದಾಗಿ ಹೇಳಿದ್ರು.

 
ಇನ್ನು  ಐನೋರ ದೊಡ್ಡಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಗ್ರಾಮಸ್ಥರು ಕೂಡ ಅನ್ನದಾನಿ ಕೆಲ್ಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಆಯ್ಕೆಯಾದ ಎರಡೇ ಎರಡು ದಿನಕ್ಕೆ ಜನಪ್ರತಿನಿಧಿಗಳು ಜನರ ಮಧ್ಯೆ ಬಂದಿರುವುದು ಖುಷಿ ತಂದಿದೆ ಎಂದ್ರು.

ಒಟ್ಟಾರೆ ಶಾಸಕ ಅನ್ನದಾನಿ ಭರ್ಜರಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಗ್ರಾಮಕ್ಕೆ ಭೇಟಿ ಕೊಟ್ಟಾಗ ಅವ್ರು ಹೇಳಿರೋ ಸಮಸ್ಯೆಯನ್ನ ಬಗೆ ಹರಿಸುವ ಕೆಲ್ಸಕ್ಕೆ ಮುಂದಾಗಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೈಕೊಟ್ಟ ಮುಂಗಾರು, ಫಸಲು ಸಿಗದ ಸಂಕಷ್ಟದಲ್ಲಿ ನಾಡದೋಣಿ ಮೀನುಗಾರರು

Video, ಪಿಲಿಕುಳ ನಿಸರ್ಗಧಾಮಕ್ಕೆ, ಹೊಸ ಅತಿಥಿಯ ಆಗಮನ, ಪ್ರವಾಸಿಗರಿಗೆ ಕಣ್ತುಂಬಿಕೊಳ್ಳಲು ಅವಕಾಶ

ಇಟಾಲಿ ರೆಸ್ಟೋರೆಂಟ್‌ನಲ್ಲಿ ಭಾರತದ ಬಗ್ಗೆ ಕೆಟ್ಟ ಪದಗಳಿಂದ ಬೈದ ಬಾಂಗ್ಲಾ ವೈಟರ್‌ಗೆ ಚಳಿ ಬಿಡಿಸಿದ ದಿಟ್ಟ ಮಹಿಳೆಯರು, Video

ಸಣ್ಣ ಪ್ರಾಯದಲ್ಲೇ ದೊಡ್ಡ ಜವಾಬ್ದಾರಿ, ಭಾವಿ ಪತ್ನಿಯಿಂದಲೇ ಹತ್ಯೆಗೊಳಗಾದ ಕೇತನ್ ಅಗರ್ವಾಲ್ ಹಿನ್ನೆಲೆ ಏನ್‌ ಗೊತ್ತಾ

ಕೈಕೊಟ್ಟ ನಮ್ಮ ಮೆಟ್ರೋ, ಮನೆ ಸೇರಲು ಕೊನೆಗೆ ಲಾರಿ ಏರಿದ ಪ್ರಯಾಣಿಕರು, Video

ಮುಂದಿನ ಸುದ್ದಿ
Show comments