Publish Date: Sat, 16 Dec 2023 (15:20 IST)
Updated Date: Sat, 16 Dec 2023 (15:56 IST)
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ಆಸ್ತಿ ಒತ್ತುವರಿ ಮಾಡಿದವರನ್ನು ಎಂದಿಗೂ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದರು.
ಆದರೆ, ಮಳೆಗಾಲ ಇದ್ದಿದ್ದರಿಂದ ಬಿಬಿಎಂಪಿಯ ಜೆಸಿಬಿಗಳು ಸದ್ದು ಮಾಡದೇ ಸುಮ್ಮನಾಗಿದ್ದವು. ಈಗ ಮಳೆಗಾಲ ಮುಕ್ತಾಯ ಆಗುತ್ತಿದ್ದಂತೆ ಮತ್ತೆ ಜೆಸಿಬಿಗಳು ಅಖಾಡಕ್ಕಿಳಿಯಲಿವೆ ಎಂದಿದ್ದಾರೆ.