Publish Date: Tue, 20 Dec 2022 (14:14 IST)
Updated Date: Tue, 20 Dec 2022 (14:34 IST)
ಬಿಬಿಎಂಪಿ ಒತ್ತುವರಿ ಅಲ್ಲ ಬದಲಿಗೆ ಸರಿಯಿದ್ದ ರಸ್ತೆಯನ್ನು ಕಿತ್ತು ಹಾಕುತ್ತಿದೆ.ಕೋಟಿ ಕೋಟಿ ಖರ್ಚು ಮಾಡಿದ್ದ ಸಿಮೆಂಟ್ ರಸ್ತೆ ಪುಡಿ ಪುಡಿಯಾಗಿದೆ.ಐದು ವರ್ಷಗಳ ಹಿಂದೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿತ್ತು.ಸರಿಯಾಗಿದ್ದ ರಸ್ತೆಯನ್ನ ಜೆಸಿಬಿಗಳು ತೆಗೆದು ಹಾಕುತ್ತಿದೆ.ಚಾಮರಾಜಪೇಟೆಯ ೫ನೇ ಮುಖ್ಯ ರಸ್ತೆಯಲ್ಲಿ ಅವಾಂತರ ಉಂಟಾಗಿದೆ.ಬಿಬಿಎಂಪಿಯಿಂದ ಮತ್ತೊಂದು ಎಡವಟ್ಟಾಗಿದ್ದು,ಸರಿಯಾಗಿದ್ದ ರಸ್ತೆಯನ್ನ ಬಿಬಿಎಂಪಿ ಹಾಳು ಮಾಡುತ್ತಿದೆ.ಕಾಮಗಾರಿಯಿಂದಾಗಿ ತೊಂದರೆಗೀಡಾದ ನಿವಾಸಿಗಳು ಬಿಬಿಎಂಪಿ ಎಡವಟ್ಟಿಗೆ ಆಕ್ರೋಶ ಹೊರಹಾಕುತ್ತಿದ್ದಾರೆ.