Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯ ತಂಗಿದ್ದ ಹೋಟೆಲ್ ನಿಂದ 11 ಲಕ್ಷ ರೂ. ಆಸ್ತಿ ಜಪ್ತಿ

ಸಿಎಂ ಸಿದ್ದರಾಮಯ್ಯ ತಂಗಿದ್ದ ಹೋಟೆಲ್ ನಿಂದ 11 ಲಕ್ಷ ರೂ. ಆಸ್ತಿ ಜಪ್ತಿ
ಬಾಗಲಕೋಟೆ , ಬುಧವಾರ, 9 ಮೇ 2018 (09:01 IST)
ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ತಂಗಿದ್ದ ಬಾದಾಮಿ ಪಟ್ಟಣದ ಹೋಟೆಲ್ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು 11 ಲಕ್ಷ ರೂ.  ಆಸ್ತಿ ಪಾಸ್ತಿ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

ಬಾದಾಮಿ ಪಟ್ಟಣದ ಕಾಂಗ್ರೆಸ್ ನಾಯಕ ಆನಂದ್ ಸಿಂಗ್ ಒಡೆತನ ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ನಿನ್ನೆ ಬೆಳ್ಳಂ ಬೆಳಿಗ್ಗೆಯೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.  ಈ ಸಂದರ್ಭದಲ್ಲಿ ಸಿಎಂ ಆಪ್ತ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ರೆಸಾರ್ಟ್ ನಲ್ಲಿಯೇ ಇದ್ದರು ಎನ್ನಲಾಗಿತ್ತು.

ಅಲ್ಲದೆ, ಕೆಪಿಸಿಸಿ ಕಾರ್ಯದರ್ಶಿ ಪಾರಮಸ್ ಮಲ್ ಜೈನ್ ತಂಗಿದ್ದ ಬಾದಾಮಿ ಪಟ್ಟಣದ ಹೊರವಲಯಲದಲ್ಲಿರುವ ಹೋಟೆಲ್ ಮಯೂರ ಮೇಲೂ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳಿಗೆ 2.8 ಲಕ್ಷ ರೂ. ನಗದು ಸಿಕ್ಕಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸೋಲಿಸಲು ಕಾಂಗ್ರೆಸ್ ಗೆ ಪಾಕಿಸ್ತಾನದ ನೆರವು: ಅಮಿತ್ ಶಾ ಆರೋಪ