Select Your Language

Notifications

webdunia
webdunia
webdunia
webdunia

ಬೆಂಗಳೂರು ಗಲಭೆ ಹಿಂದೆ ಉಗ್ರ ಸಂಘಟನೆ ಐಸಿಸ್!

ಬೆಂಗಳೂರು ಗಲಭೆ ಹಿಂದೆ ಉಗ್ರ ಸಂಘಟನೆ ಐಸಿಸ್!
ಬೆಂಗಳೂರು , ಮಂಗಳವಾರ, 18 ಆಗಸ್ಟ್ 2020 (10:08 IST)
ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ರಾತ್ರೋ ರಾತ್ರಿ ನಡೆದ ಗುಂಪು ಗಲಭೆಯ ಹಿಂದೆ ಉಗ್ರ ಸಂಘಟನೆ ಐಸಿಸ್ ಕೈವಾಡವಿದೆ ಎಂದು ಸಿಸಿಬಿ ತನಿಖೆ ವೇಳೆ ಬಹಿರಂಗವಾಗಿದೆ.

 

ಐಸಿಸ್ ಬೆಂಬಲಿ ಅಲ್ ಹಿಂದ್ ಸಂಘಟನೆಯ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿದೆ ಎಂಬುದು ಬಹಿರಂಗವಾಗಿದೆ. ಘಟನೆ ಸಂಬಂಧ ಅಲ್ ಹಿಂದ್ ಸಂಘಟನೆಯ ಸಮೀವುದ್ದೀನ್ ಎಂಬಾತನನ್ನು ಬಂಧಿಸಲಾಗಿದೆ. ಈತನೇ ಗುಂಪು ಗಲಭೆಗೆ ಕರೆ ಕೊಟ್ಟಿದ್ದ ಎನ್ನಲಾಗಿದೆ.

ಈ ಆರೋಪಿ 2016 ರಲ್ಲಿ ನಡೆದ ಆರ್ ಎಸ್ಎಸ್ ನಾಯಕ ರುದ್ರೇಶ್ ಕೊಲೆಯಲ್ಲೂ ಭಾಗಿಯಾಗಿದ್ದ ಎನ್ನಲಾಗಿದೆ. ಗುಂಪು ಗಲಭೆಯಲ್ಲಿ ಐಸಿಸ್ ಸಂಘಟನೆ ಕೈವಾಡವಿರುವುದು ಬಹಿರಂಗವಾದ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳೂ ಈ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಲಭೆ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ – ಸಿದ್ದರಾಮಯ್ಯಗೆ ಟಾಂಗ್