Select Your Language

Notifications

webdunia
webdunia
webdunia
webdunia

ಜೆಡಿಎಸ್ ಜೊತೆ ಇದ್ದುಕೊಂಡೇ ಕಾಂಗ್ರೆಸ್ ನವರು ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸುತ್ತಾರೆ-ಈಶ್ವರಪ್ಪ ವ್ಯಂಗ್ಯ

ಜೆಡಿಎಸ್ ಜೊತೆ ಇದ್ದುಕೊಂಡೇ ಕಾಂಗ್ರೆಸ್ ನವರು ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸುತ್ತಾರೆ-ಈಶ್ವರಪ್ಪ ವ್ಯಂಗ್ಯ
ಕೊಪ್ಪಳ , ಸೋಮವಾರ, 1 ಏಪ್ರಿಲ್ 2019 (06:22 IST)
ಕೊಪ್ಪಳ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಇದ್ದ ಹಾಗೇ ಮಾಡಿ ಕಾಂಗ್ರೆಸ್ ಸಚಿವರೇ ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸುತ್ತಾರೆ ಎಂದು ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಗಂಗಾವತಿಯಲ್ಲಿ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಲು ಕಾಂಗ್ರೆಸ್ ನಾಯಕರು ಬಿಡಲ್ಲ. ನಿಖಿಲ್ ಸೋಲು ನಿಶ್ಚಿತವಾಗಿದ್ದು, ಸಿಎಂ ಕುಮಾರಸ್ವಾಮಿ ಅವರಿಗೆ ಸೋಲಿನ ಭಯ ಕಾಡುತ್ತಿದೆ. ಅದ್ದರಿಂದ ರಾಜ್ಯವನ್ನೇ ಬಿಟ್ಟು ಸಿಎಂ ಮಂಡ್ಯದಲ್ಲಿ ಸೀಮಿತವಾಗಿದ್ದು, ಎಚ್‍ಡಿಡಿ ಕುಟುಂಬಕ್ಕೆ ಮಂಡ್ಯ, ಹಾಸನ, ತುಮಕೂರು ಕ್ಷೇತ್ರಗಳು ಒಂದು ದೇಶವಾಗಿದ್ದು, ಮೂರು ಕ್ಷೇತ್ರಗಳಲ್ಲೂ ಅವರು ಸೋಲುತ್ತಾರೆ ಎಂದು ಹೇಳಿದ್ದಾರೆ.


 

ಸ್ವತಃ ಸಿದ್ದರಾಮಯ್ಯನವರೇ ದೇವೇಗೌಡರನ್ನು ಸೋಲಿಸಲು ನೇತೃತ್ವ ತೆಗೆದುಕೊಂಡಿದ್ದಾರೆ. ಏಕೆಂದರೆ ದೇವೇಗೌಡ ಅವರೇ ಸಿದ್ದರಾಮಯ್ಯರನ್ನು ಸೋಲಿಸಿದ್ರು. ಸಿದ್ದರಾಮಯ್ಯನವರ ಆಪ್ತರನ್ನು ಮೈಸೂರಿನಲ್ಲಿ ದೇವೇಗೌಡರು ಸೋಲಿಸುತ್ತಾರೆ. ಸಿದ್ದರಾಮಯ್ಯ ಶಿಷ್ಯರೇ ಅವರನ್ನು ಸೋಲಿಸುತ್ತಾರೆ. ಆ ಮೂಲಕ ಕೆಲ ಕಾಂಗ್ರೆಸ್ ಪಕ್ಷದವರು ನೇರವಾಗಿಯೇ ಬಿಜೆಪಿಗೆ ಬೆಂಬಲ ನೀಡಿದರೆ, ಮತ್ತು ಕೆಲವರು ಒಳಗೊಳಗೆ ಬಿಜೆಪಿ ಬೆಂಬಲ ನೀಡುತ್ತಾರೆ ಎಂದು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯಮಿಗಳ ಸಾಲ ಮನ್ನಾ ಮಾಡಿದ ಕೇಂದ್ರ ಸರ್ಕಾರಕ್ಕೆ ರೈತರ ಸಾಲಮನ್ನಾ ಮಾಡಲು ಹಣ ಇಲ್ಲ- ರಾಹುಲ್ ಗಾಂಧಿ ಕಿಡಿ