Select Your Language

Notifications

webdunia
webdunia
webdunia
webdunia

ಬಸವಣ್ಣನವರ ನೂತನ ಅನುಭವ ಮಂಟಪಕ್ಕೆ ಅನುದಾನ ನೀಡಿ- ಸಿಎಂಗೆ ಈಶ್ವರ್ ಖಂಡ್ರೆ ಮನವಿ

ಬಸವಣ್ಣನವರ ನೂತನ ಅನುಭವ ಮಂಟಪಕ್ಕೆ ಅನುದಾನ ನೀಡಿ- ಸಿಎಂಗೆ ಈಶ್ವರ್ ಖಂಡ್ರೆ ಮನವಿ
ಬೀದರ್ , ಗುರುವಾರ, 27 ಜೂನ್ 2019 (13:20 IST)
ಬೀದರ್ : ಬಸವಕಲ್ಯಾಣ ತಾಲೂಕಿನ ಉಜಳಂಬದಲ್ಲಿ ಇಂದು ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಹೂಡುವ  ಹಿನ್ನಲೆಯಲ್ಲಿ  ಬಸವಣ್ಣನವರ ನೂತನ ಅನುಭವ ಮಂಟಪಕ್ಕೆ ಅನುದಾನ ನೀಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮನವಿ ಮಾಡಿದ್ದಾರೆ.




ಈ ಬಗ್ಗೆ ಸಿಎಂ ಪತ್ರ ಬರೆದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಬಸವಣ್ಣನವರ ನೂತನ ಅನುಭವ ಮಂಟಪಕ್ಕೆ ಸರ್ಕಾರ 600 ಕೋಟಿ ರೂ. ಘೋಷಣೆ ಮಾಡಿದ್ರು ಬಿಡುಗಡೆ ಆಗಿಲ್ಲ. ಸಿಎಂ ತಕ್ಷಣವೇ 100 ಕೋಟಿ ಅನುದಾನ ಬಿಡಿಗಡೆ ಮಾಡಬೇಕು. ಕೊಟ್ಟ ಮಾತಿನಂತೆ ಕಾರಂಜಾ ಸಂತ್ರಸ್ರರಿಗೆ ಪರಿಹಾರ ಘೋಷಿಸಬೇಕು. ಬೀದರ್ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು  ಸಿಎಂ ಕುಮಾರಸ್ವಾಮಿಗೆ  ಮನವಿ ಮಾಡಿದ್ದಾರೆ.

ಸಿಎಂ ಕುಮಾರಸ್ವಾಮಿ ಅವರು  ರಾಯಚೂರಿನ ಕರೇಗುಡ್ಡದಲ್ಲಿ 2ನೇ ಗ್ರಾಮವಾಸ್ತವ್ಯ ಮುಗಿಸಿ ಇಂದು ಬಸವಕಲ್ಯಾಣ ತಾಲೂಕಿನ ಉಜಳಂಬದಲ್ಲಿ  3ನೇ  ಗ್ರಾಮವಾಸ್ತವ್ಯ ಮಾಡಲಿದ್ದಾರೆ.


 

Share this Story:

Follow Webdunia kannada

ಮುಂದಿನ ಸುದ್ದಿ

ಸಾರಿಗೆ ಸಚಿವ ಡಿಸಿ ತಮ್ಮಣ್ಣನ ವಿರುದ್ಧ ಸರ್ಕಾರಿ ಸಾರಿಗೆ ನೌಕರರಿಂದ ಇಂದು ಪ್ರತಿಭಟನೆ