Select Your Language

Notifications

webdunia
webdunia
webdunia
webdunia

ರೈತರನ್ನ ಹೇಡಿ ಎಂದ ಬಿಸಿ ಪಾಟೀಲ್ ವಿರುದ್ಧ ಈರಣ ಕಡಾಡಿ ಅಸಮಾಧಾನ

ರೈತರನ್ನ ಹೇಡಿ ಎಂದ ಬಿಸಿ ಪಾಟೀಲ್ ವಿರುದ್ಧ ಈರಣ ಕಡಾಡಿ ಅಸಮಾಧಾನ
ಬೆಂಗಳೂರು , ಶುಕ್ರವಾರ, 4 ಡಿಸೆಂಬರ್ 2020 (10:58 IST)
ಬೆಂಗಳೂರು : ಕೃಷಿ ಸಚಿವ ಬಿ.ಸಿ.ಪಾಟೀಲ್ ‘ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು’ ಎಂಬ ಹೇಳಿಕೆಗೆ ಈರಣ ಕಡಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಸಿ.ಪಾಟೀಲ್ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ರೈತರು ಸ್ವಾಭಿಮಾನಿಗಳು, ಹೇಡಿಗಳಲ್ಲ. ಮಾತಿನ ಬರದಲ್ಲಿ ಕೃಷಿ ಸಚಿವರು ಹೇಳಿರಬಹುದು. ಹಾಗಾಗಿ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಲೇಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೇ ಈ ಹೇಳಿಕೆಯ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಬಿ.ಸಿ.ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ರಾತ್ರಿ ದಿನವೇ ಕಿರುಕುಳ: ಪತಿ ವಿರುದ್ಧ ದೂರು ಕೊಟ್ಟ ಪತ್ನಿ