Publish Date: Sun, 03 May 2020 (15:45 IST)
Updated Date: Sun, 03 May 2020 (15:48 IST)
ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಪೊಲೀಸ್ ಹಾಗೂ ಇತರ ಸಮರ ಸೈನಿಕರಿಗೆ ವಿನೂತನವಾಗಿ ಗೌರವ ಸಲ್ಲಿಸಲಾಯಿತು.
ಕೊಡಗು ಜಿಲ್ಲೆಯಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಪೊಲೀಸ್ ಹಾಗೂ ಇತರ ಸಮರ ಸೈನಿಕರಿಗೆ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಮಾಜಿ ಸೈನಿಕರ ಸಂಘದ ವತಿಯಿಂದ ಗೌರವ ಸಲ್ಲಿಸಲಾಯಿತು.
ಮಡಿಕೇರಿಯಲ್ಲಿರುವ ಪೊಲೀಸ್ ಹುತಾತ್ಮ ಪ್ರತಿಮೆಗೆ ನಿವೃತ್ತ ಏರ್ ಮಾರ್ಷಲ್ ಕೆ ಸಿ ಕಾರ್ಯಪ್ಪ ಹಾಗೂ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ಪುಷ್ಪ ನಮನ ಸಲ್ಲಿಸಿದರು.
ಕೊರೊನಾ ವಿರುದ್ಧ ಹೋರಾಡುತ್ತಿರುವ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಹೋರಾಟದಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿಯನ್ನು ಕೂಡ ಪ್ರಾರ್ಥನೆ ಮೂಲಕ ಈ ಸಂದರ್ಭ ಕೋರಲಾಯಿತು.