Webdunia - Bharat's app for daily news and videos

Install App

ಅದೆಷ್ಟೋ ಮುಚ್ಚಿ ಹೋಗಿದ್ದ ಇಂದಿರಾ ಕ್ಯಾಂಟಿನ್ ಗಳಿಗೆ ಮರುಜೀವ…!

Webdunia
ಗುರುವಾರ, 25 ಮೇ 2023 (18:01 IST)
ಅಮ್ಮಾ ಕ್ಯಾಂಟೀನ್ ಮಾದರಿಯಲ್ಲೇ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಂಡಿತ್ತು. ಬಡವರ ಮಧ್ಯಮ ವರ್ಗದ ಜನರ ಪಾಲಿಗೆ ಅಕ್ಷಯ ಪಾತ್ರೆಯಾಗಿದ್ದ ಇಂದಿರಾ ಕ್ಯಾಂಟಿನ್ ಹಲವೆಡೆ ಅನೇಕ ಕಾರಣಗಳಿಂದ ಮುಚ್ಚಿತ್ತು. ಈಗ  ಮುಚ್ಚಿಹೋಗಿದ್ದ ಕ್ಯಾಂಟಿನ್ಗಳಿಗೆ ಕಾಂಗ್ರೆಸ್ ಸರ್ಕಾರ ಮತ್ತೆ ಮರುಜೀವ ನೀಡುತ್ತಿದ್ದು ಜನ ಫುಲ್ ಖುಷ್ ಆಗಿದ್ದಾರೆ. ಸಿದ್ದರಾಮಯ್ಯ ಅವರ ಕನಸಿನ ಕೂಸಗಿದ್ದ ಇಂದಿರಾ ಕ್ಯಾಂಟಿನ್ ಗಳು ರಾಜ್ಯದ ಎಲ್ಲೆಡೆ ಆರಂಭಗೊಂಡಿದ್ದವು, ಬಡವರಿಗೆ , ಮಧ್ಯಮ ವರ್ಗದ ಜನರಿಗೆ ಕೈ ಗೆಟಕುವ ಬೆಲೆಯಲ್ಲಿ ಆಹಾರ ಪೂರೈಸುವಲ್ಲಿ ಯಶಸ್ವಿಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ನಾನಾ ಸಮಸ್ಯೆಗಳು ಹಾಗೂ ನಾನಾ ಕಾರಣಗಳಿಂದ ಕೆಲವೆಡೆ ಇಂದಿರಾ ಕ್ಯಾಂಟಿನ್ ಗಳನ್ನು ಮುಚ್ಚಲಾಗಿತ್ತು, ಇನ್ನೂ ಹಲವೆಡೆ ಅನೇಕ ಈ ಕ್ಯಾಂಟಿನ್ ಗಳು ಛಲ ಬಿಡದ ತಿಮಿಕ್ರಮನಂತೆ ಸಾವಿರ ಸಮಸ್ಯೆಗಳು ಎದುರಾದರು ಎಲ್ಲಾವನ್ನು ಎದುರಿಗೆ ಜನರ ಹಸಿವೂ ನೀಗಿಸುವಲ್ಲಿ ಯಶಸ್ವಿಯಾಗಿದ್ದವು,ಇನ್ನು ಸಿಎಂ ಸಿದ್ದರಾಮಯ್ಯ  ಮುಚ್ಚಿ ಹೋಗಿರುವ ಇಂದಿರಾ ಕ್ಯಾಂಟಿನ್ ಗಳನ್ನು  ಮತ್ತೆ ತೆರೆಯುವುದಾಗಿ ಭರವಸೆ ನೀಡಿದ್ದರಿಂದ, ಅದೆಷ್ಟೋ  ಹಸಿದಾಗ ಇಂದಿರಾ ಕ್ಯಾಂಟಿನ್ ಗಳ ಬಳಿ ಬಂದು ಹೊಟ್ಟೆ ತುಂಬಾ ಊಟ ಮಾಡುತ್ತಿದ್ದ ಜೀವಗಳು ಖುಷ್ ಆಗಿದ್ದಾರೆ.

ಇನ್ನು ಸಿಎಂ ಸಿದ್ದು ಆದೇಶದಂತೆ ಎಚ್ಚೆತ್ತಾ ಬಿಬಿಎಂಪಿ . ಈಗಾಗಲೇ ಇಂದಿರಾ ಕ್ಯಾಂಟೀನ್ ಮರು  ಜೀವ ಕೊಡಲು ಸಿದ್ದವಾಗಿದೆ ಇದೇ ವಿಚಾರವಾಗಿ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ಜಯರಾಂ ರಾಯ್‌ಪುರ  ಕೆಲವು ಕಡೆ ಕ್ಯಾಂಟೀನ್‌ನಲ್ಲಿ ಡಿಮಾಂಡ್ ಕಡಿಮೆ ಆಗಿತ್ತು  ಇನ್ನು ಕೆಲವೆಡೆ ಉತ್ತೇಜನ ಕಡಿಮೆ ಆಗಿತ್ತು ಅಂತ ಕ್ಲೋಸ್ ಆಗಿತ್ತು ಇರೋ ಕ್ಯಾಂಟೀನ್‌ಗಳ ಪೈಕಿ ೧೦ ಮೊಬೈಲ್ ಕ್ಯಾಂಟೀನ್ ಕ್ಲೋಸ್ ಆಗಿದೆ ೨೪೩ ಕಡೆಯೂ ಕ್ಯಾಂಟೀನ್ ಆರಂಭಿಸುತ್ತೇವೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ. 

ಹೌದು ಖಾಸಗಿ ಹೋಟೆಲ್ ಗಳಲ್ಲಿ ಒಂದು ಹೊತ್ತಿನ ಊಟಕ್ಕೆ 70 – 80 ರೂಪಾಯಿಗಳಷ್ಟು ನೀಡ ಬೇಕಾಕಿದೆ ಆದ್ರೆ ಇಂದಿರಾ ಕ್ಯಾಂಟಿನ್ ನಲ್ಲಿ 10 ರೂಪಾಯಿಗೆ ಹೊಟ್ಟೆ ತುಂಬಾ ಊಟ ಸಿಗುತ್ತಿದ್ದರಿಂದ ಜನ ಮುಗಿ ಬಿದ್ದು ಇಂದಿರಾ ಕ್ಯಾಂಟಿನ್ ಗಳಲ್ಲಿ ಊಟ ಮಾಡುತ್ತಿದ್ದರು,ಇನ್ನೂ ಕೆಲವೆಡೆ ಕ್ಯಾಂಟಿನ್ ಗಳು ಬಿಬಿಎಂಪಿ ಸಹಕಾರದೊಂದಿಗೆ ಅನೇಕ ಸಮಸ್ಯೆಗಳು ಇದ್ರು ಕೂಡ ಜನರ ಹೊಟ್ಟೆ ತುಂಬಿಸುವಲ್ಲಿ ಯಶಸ್ವಿಯಾಗಿದ್ದವು, ಇನ್ನು ಅಂತಹ ಕ್ಯಾಂಟಿನ್ಗಳು  ಈ ಬಾರಿ ಇನ್ನಷ್ಟೂ ಅಭಿವೃದ್ದಿ ಭಾಗ್ಯಯಿದೆ ಹಾಗಾಗೀ ಜನ ಈ ಬಾರಿ ಇಂದಿರಾ ಕ್ಯಾಂಟಿನ್ಗಳಲ್ಲಿ ಶುಚಿ ರುಚಿಯಾದ ಆಹಾರವನ್ನು ಸವಿಯಲು ಸಿದ್ದವಾಗಿದ್ದಾರೆ

 ಓಟ್ನಲಿ ಮುಚ್ಚಿರುವ ಇಂದಿರಾ ಕ್ಯಾಂಟಿನ್ ಗಳು  ಆದಷ್ಟೂ ಬೇಗ ತೆರೆದು ಬಡವರ ಪಾಲಿನ ಅಕ್ಷಯ ಪಾತ್ರೆ ಯಾಗಲಿ ಎಂಬುದು ರಾಜ್ ನ್ಯೂಸ್ ನ ಆಶಯ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರೀ ಮಳೆ ಮುನ್ಸೂಚನೆ: ನಾಳೆ ಈ ಭಾಗದ ಶಾಲಾ ಮಕ್ಕಳಿಗೆ ರಜೆ ಘೋಷಣೆ

ಅಯೋಗ್ಯನ ಮಾತು ಕೇಳಿ ಧರ್ಮಸ್ಥಳದ ಪ್ರಕರಣ ಎಸ್‌ಐಟಿಗೆ ವಹಿಸಿದ್ದಾರೆ: ಪ್ರಹ್ಲಾದ ಜೋಶಿ

ರಾಹುಲ್ ಗಾಂಧಿಯಿಂದ ಸಂವಿಧಾನಕ್ಕೆ ಅವಮಾನ: ಪಿನ್ ಟು ಪಿನ್ ಉತ್ತರ ಕೊಟ್ಟ ಚುನಾವಣಾ ಆಯೋಗ

RSS ದೇಶದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದೆ, ಇದು ಭಾರತದ ತಾಲಿಬಾನ್: ಬಿಕೆ ಹರಿಪ್ರಸಾದ್

ಸಿದ್ದರಾಮಯ್ಯ ಕಮ್ಯೂನಿಸ್ಟ್‌ಗಳಿಗೆ ರೆಡ್ ಕಾರ್ಪೆಟ್ ಹಾಸಿದ್ದೆ ಇದಕ್ಕೆಲ್ಲ ಕಾರಣ: ಆರ್‌ ಅಶೋಕ್‌

ಮುಂದಿನ ಸುದ್ದಿ