Select Your Language

Notifications

webdunia
webdunia
webdunia
webdunia

ಬೆಳ್ಳಂದೂರು ಬಳಿಕ ಈಗ ಕೆಂಗೇರಿ ಹೊಸಕೆರೆಯಲ್ಲೂ ನೊರೆಯ ಕಾಟ

ಬೆಳ್ಳಂದೂರು ಬಳಿಕ ಈಗ ಕೆಂಗೇರಿ ಹೊಸಕೆರೆಯಲ್ಲೂ ನೊರೆಯ ಕಾಟ
bangalore , ಗುರುವಾರ, 25 ಮೇ 2023 (16:05 IST)
ಬೆಳ್ಳಂದೂರು ಬಳಿಕ ಈಗ ಕೆಂಗೇರಿ ಬಳಿಯ ಹೊಸಕೆರೆಯಲ್ಲೂ ನೊರೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆರೆ ಬಹುತೇಕ ತುಂಬಿದ್ದು ನೀರು ಹರಿಯುತ್ತಿದೆ. ಈ ಹರಿಯುವ ನೀರಿನಲ್ಲಿ ನೊರೆಯ ರಾಶಿರಾಶಿ ಕಾಣಿಸಿಕೊಂಡಿದ್ದು, ರಾಜಕಾಲುವೆಯ ಮೂಲಕ ಇಡೀ ಪ್ರದೇಶದಲ್ಲಿ ಪಸರಿಸುತ್ತಿದ್ದು ಅನಾರೋಗ್ಯದ ಭೀತಿ ಹೆಚ್ಚಾಗಿದೆ.ತ್ಯಾಜ್ಯ ನೀರು ಕೆರೆ ಸೇರುತ್ತಿದ್ದು, ಸುತ್ತಮುತ್ತಲ ಪ್ರದೇಶದಲ್ಲು ದುರ್ನಾತ ಬೀರುತ್ತಿದೆ. ಇದರಲ್ಲಿ ವಿಷಕಾರಿ ರಾಸಾಯನಿಕಗಳೂ ಸೇರಿರುವ ಕಾರಣ ಈ ರೀತಿ ನೊರೆ ಬರುತ್ತಿದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜಕಾಲುವೆಯಲ್ಲೂ ಕಿಲೋಮೀಟರ್ ಉದ್ದಕ್ಕೂ ನೊರೆ ಕಾಣಿಸುತ್ತಿದೆ. ಬಿಬಿಎಂಪಿ ಆರೋಗ್ಯ ಇಲಾಖೆ ಇತ್ತ ಗಮನ ಹರಿಸಿ ಸಮುದಾಯ ಆರೋಗ್ಯ ರಕ್ಷಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಹುನಿರೀಕ್ಷಿತ ಹಳದಿ ಮಾರ್ಗವು ಈ ವರ್ಷದ ಡಿಸೆಂಬರ್ ನಲ್ಲಿ ಕಾರ್ಯಾಚರಣೆ