Select Your Language

Notifications

webdunia
webdunia
webdunia
webdunia

ಮಂಡ್ಯದಲ್ಲಿ ಕೌರವರಂತಹ ಘಟಾನುಘಟಿಗಳು ಹೆಣ್ಣುಮಗಳ ಮುಂದೆ ತಲೆ ತಗ್ಗಿಸಿದ್ದಾರೆ- ಆರ್. ಅಶೋಕ್

ಮಂಡ್ಯದಲ್ಲಿ ಕೌರವರಂತಹ ಘಟಾನುಘಟಿಗಳು ಹೆಣ್ಣುಮಗಳ ಮುಂದೆ ತಲೆ ತಗ್ಗಿಸಿದ್ದಾರೆ- ಆರ್. ಅಶೋಕ್
ಮಂಗಳೂರು , ಶನಿವಾರ, 6 ಏಪ್ರಿಲ್ 2019 (14:56 IST)
ಮಂಗಳೂರು : ಮಂಡ್ಯದಲ್ಲಿ ಕೌರವರಂತಹ ಘಟಾನುಘಟಿಗಳು ಹೆಣ್ಣುಮಗಳ ಮುಂದೆ ತಲೆ ತಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳುವುದರ ಮೂಲಕ ಮಾಜಿ ಡಿಸಿಎಂ ಆರ್. ಅಶೋಕ್ ಮೈತ್ರಿ ಸರ್ಕಾರದ ಕಾಲೆಳೆದಿದ್ದಾರೆ.


ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಸರ್ಕಾರವೇ ಮಂಡ್ಯದಲ್ಲಿ ಕೂತಿದೆ. ಓರ್ವ ಹೆಣ್ಣು ಮಗಳು ಅವರ ವಿರುದ್ಧ ಫೈಟ್ ಮಾಡುತ್ತಿರುವುದನ್ನು ನೋಡಿದರೆ ಸರ್ಕಾರದ ಯೋಗ್ಯತೆ ಗೊತ್ತಾಗುತ್ತೆ ಎಂದು ಲೇವಡಿ ಮಾಡಿದ್ದಾರೆ.


ಸುಮಲತಾಗೆ ನಾವು ಬೆಂಬಲ ಘೋಷಿಸಿದ್ದೇವೆ. ಅವರು ಚುನಾವಣೆಯಲ್ಲಿ ಗೆದ್ದೇ ಗೆಲುತ್ತಾರೆ. ಕಾವೇರಿ ವಿಚಾರದಲ್ಲಿ ಅಂಬರೀಶ್ ಎರಡು ವರ್ಷ ಕೇಂದ್ರ ಸಚಿವ ಸ್ಥಾನ ತ್ಯಾಗ ಮಾಡಿದ್ದಾರೆ. ಅಂತಹ ವ್ಯಕ್ತಿಯ ಶ್ರೀಮಂತರಿಗೆ ಕಿರುಕುಳ ಕೊಟ್ಟು ಅವಮಾನ ಮಾಡುತ್ತಿರುವ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲ್ಲ ಎಂದು ಅವರು ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣಾ ಪ್ರಚಾರಕ್ಕೆ ಹಣವಿಲ್ಲದೆ ಕಿಡ್ನಿ ಮಾರಲು ಮುಂದಾದ ಪಕ್ಷೇತರ ಅಭ್ಯರ್ಥಿ