Publish Date: Sat, 15 Jun 2019 (20:24 IST)
Updated Date: Sat, 15 Jun 2019 (20:28 IST)
IMA ಹಗರಣವನ್ನ ರಾಷ್ಟ್ರೀಯ ವಿಪತ್ತು ಅಂತಾ ಘೋಷಣೆ ಮಾಡಬೇಕು. ಹೀಗಂತ ಬಿಜೆಪಿ ಮುಖಂಡ ಆಗ್ರಹ ಮಾಡಿದ್ದಾರೆ.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಜೀಂ ಹೇಳಿಕೆ ನೀಡಿದ್ದು, IMA ಹಗರಣವನ್ನ ರಾಷ್ಟ್ರೀಯ ವಿಪತ್ತು ಅಂತಾ ಘೋಷಣೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು. ಶಿವಾಜಿನಗರ ಶಾಸಕ ರೋಷನ್ ಬೇಗ್ ಹಾಗೂ ಸಚಿವ ಜಮೀರ್ ಅಹ್ಮದ್ IMA ಪ್ರಮೋಟರ್ಸ್ ಎಂದು ಟೀಕೆ ಮಾಡಿದ್ರು.
SIT ಯಿಂದ ತನಿಖೆ ನಡೆಸೋದು ಅಸಾಧ್ಯ ಎಂದ ಅವರು, ಪ್ರಕರಣ ರಾಜ್ಯ, ದೇಶದ ಹೊರಗೆ ಹರಡಿದೆ. CBI ನಿಂದ ಮಾತ್ರ ತನಿಖೆ ನಡೆಸಿದರೆ ಸತ್ಯ ಬಯಲಿಗೆ ಬರಲು ಸಾಧ್ಯವಾಗುತ್ತದೆ.
ಮೈಸೂರಿನಲ್ಲೂ ಇಂಥದ್ದೆ ಒಂದು ಹಗರಣ ನಡೆದಿದೆ. ಆ ಹಗರಣ ಆರೋಪಿಗೂ ಇದೇ ಜಮೀರ್ ಅಹ್ಮದ್ ಊಟ ಮಾಡಿಸಿದ ಪೋಟೊ ಸಿಕ್ಕಿದೆ. ಹೀಗಂತ ಅಬ್ದುಲ್ ಅಜೀಂ ಹೇಳಿಕೆ ನೀಡಿದ್ದಾರೆ.