Publish Date: Mon, 01 May 2023 (15:40 IST)
Updated Date: Mon, 01 May 2023 (15:46 IST)
ಪ್ರಧಾನಿ ನರೇಂದ್ರ ಮೋದಿ ಸರ್ಪ ಆಗುವುದಾದರೆ ಸರ್ಪ ಡೇಂಜರೇ ಎಂದು ಮಾಜಿ ಸಿಎಂ H.D. ಕುಮಾರಸ್ವಾಮಿ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಜನರಿಗೋಸ್ಕರ ನಾನು ಸರ್ಪವಾಗಲು ಸಿದ್ದ ಎಂದು ಮೋದಿ ಹೇಳಿದ್ದಾರೆ.. ಅದು ಯಾವತ್ತಿದ್ದರೂ ಡೇಂಜರೇ.. ಜನರಿಗಾದರೂ ಅಷ್ಟೇ, ಇನ್ನೊಬ್ಬರಿಗಾದರೂ ಅಷ್ಟೇ ಸರ್ಪ ಸರ್ಪಾನೇ ಎಂದು ವ್ಯಂಗ್ಯವಾಡಿದ್ದಾರೆ.. ಅದರ ಬಗ್ಗೆ ನಾನೀಗ ಚರ್ಚೆ ಮಾಡಲು ಹೋಗೋದಿಲ್ಲ.. ಸರ್ಪ, ವಿಷಕನ್ಯೆ ಇವತ್ತಿನ ರಾಜಕಾರಣದಲ್ಲಿ ಅವಶ್ಯಕತೆ ಇಲ್ಲ.. ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ.. ಅಕಾಲಿಕ ಮಳೆಯಿಂದ ರೈತರ ಬೆಳೆ ನಾಶವಾಗಿದೆ, ಈ ಬಗ್ಗೆ ಚರ್ಚೆಯಾಗಬೇಕು.. ವಿಷಕನ್ಯೆ, ಸರ್ಪದ ಮಾತಿನಿಂದ ಇವರು ಜನರ ಬದುಕು ಸರಿಮಾಡಿಕೊಡ್ತಾರಾ.. ಅದೆಂತಹದ್ದೋ ಪರಿವಾರ ಅಂತೆ, ಎಟಿಎಂ ಅಂತೆ.. ಯಾವ ಎಟಿಎಮ್ಮೋ, ಯಾವ ಡಬಲ್ ಇಂಜಿನ್ನೋ, ಬಿಜೆಪಿಯವರು ಎಲ್ಲವನ್ನ ಲೂಟಿ ಹೊಡೆದುಕೊಂಡು ಕೂತಿದ್ದಾರೆ. ಮೋದಿಯವಂತವರು ಬಂದು ಕರಪ್ಷನ್ ಬಗ್ಗೆ ಚರ್ಚೆ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.