Select Your Language

Notifications

webdunia
webdunia
webdunia
webdunia

ಯಾರಾದ್ರೂ ಬೆಂಕಿ ಹಚ್ಚೋರು ಇದ್ರೆ, ಅದು ಸಿದ್ದರಾಮಯ್ಯ-ಅಶೋಕ್

R Ashok
bangalore , ಭಾನುವಾರ, 24 ಡಿಸೆಂಬರ್ 2023 (17:00 IST)
ಶಾಲೆಗಳಲ್ಲಿ ಶೌಚಾಲಯ ತೊಳೆಯಲು ನೌಕರರನ್ನ ಇಡ್ತೀರಿ ಅಂದ್ರಿ ನಾಚಿಕೆ ಆಗಬೇಕು ನಿಮಗೆ.ಕಡಿಮೆ ಹಣ ಕೊಟ್ಟಿದ್ದಕ್ಕೆ ಮಕ್ಕಳ ಕೈಯಲ್ಲಿ ತೊಳೆಸ್ತಿದ್ದಾರೆ.

ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರ ಮಾಡಿದ್ರು.ಬಿ.ಆರ್ ಪಾಟೀಲ್ ಹೇಳಿದ್ರು ಒಂದು ಕಲ್ಲು ಹಾಕಿಲ್ಲ ಅಂತ ಈ ಸರ್ಕಾರ ಪಾಪರ್ ಆಗಿ, ಪೇಪರ್ ಹಾಕ್ತಿದ್ದಾರೆ.ಇದೆಲ್ಲವನ್ನೂ ಮರೆಮಾಚಲು ಹಿಂದೂ, ಮುಸ್ಲಿಂ ಹೇಳಿಕೆ ನೀಡಿದ್ದಾರೆ.ಹಿಂದೆ ವೀರಶೈವ ಲಿಂಗಾಯತ ಹೊಡೆದ್ರು.ಈಗ ಹಿಂದೂ ಮುಸ್ಲಿಂ ನಡುವೆ ತಂದಿಡೋ ಕೆಲಸ ಮಾಡ್ತಿದ್ದಾರೆ.ಯಾರಾದ್ರೂ ಬೆಂಕಿ ಹಚ್ಚೋರು ಇದ್ರೆ, ಅದು ಸಿದ್ದರಾಮಯ್ಯ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
 
ಪದಾಧಿಕಾರಿಗಳ ನೇಮಕ ವಿಚಾರವಾಗಿ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು,ನಾನು ಪಕ್ಷದ ಸಿಪಾಯಿ.ಹೈಕಮಾಂಡ್ ಹೇಳಿದಂತೆ ನಡೆದುಕೊಳ್ತೀನಿ.ಹೈಕಮಾಂಡ್ ಸಮಯ ಕೊಟ್ಟಾಗ ಭೇಟಿ ಕೊಡ್ತೀನಿ.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೋರಾಟ ಮಾಡೋದೇ ನಮ್ಮಗುರಿ.ಅದನ್ನ ಹೈಕಮಾಂಡ್ ಬಳಿ ಚರ್ಚೆ ಮಾಡ್ತೀನಿ.28ಕ್ಕೆ 28 ಕ್ಷೇತ್ರ ಗೆಲ್ಲೋದೆ ನಮ್ಮ‌ಗುರಿ.ಅದರ ಬಗ್ಗೆ ನಾವು ನಿರ್ಧಾರ ಮಾಡ್ತಿದ್ದೇವೆ.ಕೇಂದ್ರದಲ್ಲಿ ಹೈಕಮಾಂಡ್ ಕೂಡ ಯಾರನ್ನ ಅಭ್ಯರ್ಥಿ ಮಾಡಬೇಕು ಅಂತ ಚರ್ಚೆ ನಡೆಯುತ್ತಿದೆ.ಯಾರನ್ನ ಅಭ್ಯರ್ಥಿ ಮಾಡಿದ್ರೆ ಗೆಲ್ಲಬಹುದು ಅನ್ನೋದನ್ನ ಲೆಕ್ಕ ಹಾಕಲಾಗ್ತಿದೆ ಎಂದು ಆರ್ ಅಶೋಕ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೇಮಾವತಿ ನದಿಗೆ ವಿಷಪ್ರಾಶನ ಆರೋಪ