Webdunia - Bharat's app for daily news and videos

Install App

ಸಮಸ್ಯೆಗಳನ್ನ ಸಿಎಂ‌ ಮುಂದೆ ಪ್ರಸ್ತಾಪಿಸುತ್ತೇನೆ- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

Webdunia
ಸೋಮವಾರ, 31 ಜುಲೈ 2023 (17:55 IST)
ಇಂದು ಸಾರಿಗೆ ಸಿಬ್ಬಂದಿಗಳು ಸೇರಿದಂತೆ ಹಲವು ಸಂಘಟನೆಗಳ ಜೊತೆ ಸಭೆ ನಡೆಸಿದ ಬಳಿಕ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಪ್ರತಿಕ್ರಿಯಿಸಿದ್ದು,ಕಳೆದವಾರ ಖಾಸಗಿ ಸಾರಿಗೆ ಸಂಘಟನೆಗಳಿಗೆ   ಸಭೆ ನಡೆಸುವ ಭರವಸೆ ಕೊಟ್ಟಿದ್ಧೆ,ಇವತ್ತು ಸಭೆಯನ್ನ ನಡೆಸಿದ್ದೇನೆ.ಎಲ್ಲಾ ಸಂಘಟನೆಗಳು ಬಂದಿದ್ದವು.ಕೆಲವು ವಿಚಾರಗಳು ಪ್ರಸ್ತಾಪ ವಾಗಿದೆ.ಒಲಾ ಊಬರ್ ರ‌್ಯಾಪಿಡೋ ಬಗ್ಗೆಯೂ ಚರ್ಚೆಯಾಗಿದೆ .ಅದು ಈಗಾಗಲೇ ನ್ಯಾಯಾಲಯದಲ್ಲಿದೆ .ಕೆಲವು ಕಾನೂನು ಬಾಹಿರ ಆ್ಯಪ್ ಗಳ ಬಗ್ಗೆ ಯೂ ಪ್ರಸ್ತಾಪಿಸಿದ್ದಾರೆ .ಏರ್ ಪೋರ್ಟ್ ನಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲು‌ ಹೇಳಿದ್ದಾರೆ.ಶಕ್ತಿ ಯೋಜನೆ ಯಿಂದ ಆದಾಯ ಇಳಿಕೆಯಾಗಿದೆ ಎಂದಿದ್ದಾರೆ.ಆಟೋ ಪರ್ಮಿಟ್ ವಿಸ್ತರಿಸಲು ಮನವಿ ಮಾಡಿದ್ದಾರೆ.ಈಗ ಆಟೊ ಗಳಿಗೆ ಬಿಬಿಎಂಪಿ ವ್ಯಾಪ್ತಿಯ ವರ್ಷ ಗೆ  ಲಿಮಿಟ್ ಇದೆ ಇದನ್ನ  ಮುಂದಿನ ದಿನಗಳಲ್ಲಿ ನಗರ ಜಿಲ್ಲೆ ಎಂದು ಮಾಡ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
 
ಮಕ್ಕಳಿಗೆ ವಿದ್ಯಾರ್ಥಿ ವೇತನದ ವಿಚಾರ ಪ್ರಸ್ತಾಪಿಸಲಾಗಿದೆ.ಇನ್ಶುರೆನ್ಸ್ ಗಳನ್ನ ಹೃದಯಾಗಾತಕ್ಕೂ ವಿಸ್ತಿರಿಸಲು ಹೇಳಿದ್ದಾರೆ.ಸರ್ಕಾರದಿಂದ ಆ್ಯಫ್ ಮಾಡಿ ಎಂದು ಖಾಸಗಿಯವರು ಹೇಳಿದ್ದಾರೆ.ಮೆಟ್ರೋ ನಿಲ್ದಾಣ ಗಳಲ್ಲಿ ಆಟೋ ಸ್ಟ್ಯಾಂಡ್ ಮಾಡುವಂತೆ ಮನವಿ ಮಾಡಿದ್ದಾರೆ.ಹಲವಾರು ಸಮಸ್ಯೆಗಳನ್ನ ಹೇಳಿದ್ದಾರೆ.ಇಲಾಖೆಯ ವ್ಯಾಪ್ತಿಯಲ್ಲಿ ಬರುವಂತವುಗಳನ್ನ ಬಗೆಹರಿಸುತ್ತೇನೆ‌.
 
ಕೆಲವು ಸಮಸ್ಯೆಗಳನ್ನ ಸಿಎಂ‌ ಮುಂದೆ ಪ್ರಸ್ತಾಪಿಸುತ್ತೇನೆ.ಲೈಪ್ ಟ್ಯಾಕ್ಸ್ ಗಳನ್ನ 10ಲಕ್ಷಕ್ಕೆ ಹೆಚ್ಚಿಸಲಾಗಿದೆ.ಟ್ಯಾಕ್ಸ್ ಕಡಿಮೆ ಮಾಡಲು ಹೇಳಿದ್ದಾರೆ.ಮುಖ್ಯಮಂತ್ರಿ ಗಳ‌ ಬಳಿ‌ ವಿಚಾರವನ್ನ ಪ್ರಸ್ತಾಪಿಸುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೀದರ್‌; ಸ್ಲೀಪರ್‌ ಬಸ್‌ನಲ್ಲೇ ಆತ್ಮಹತ್ಯೆಗೆ ಶರಣಾದ ಬಸ್‌ ಚಾಲಕ, ಪರಿಹಾರಕ್ಕೆ ಆಗ್ರಹ

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ವಿಶೇಷ ಮಾನ್ಯತೆಯ ಗರಿ

ಧರ್ಮಸ್ಥಳದಲ್ಲಿ ವಿಚಾರದಲ್ಲಿ ಸರ್ಕಾರದ ನಡೆ ಸರಿಯಿಲ್ಲ: ಕುಮಾರಸ್ವಾಮಿ ಕಿಡಿ

ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಈಗ ಸುಜಾತ ಭಟ್ ಗೆ ನೋ ಎಂಟ್ರಿ

ಮೈಸೂರು ದಸರಾ ಸುತ್ತಲಿನ ಬೆಳವಣಿಗೆ ಬೇಸರ ತಂದಿದೆ: ಪ್ರಮೋದಾದೇವಿ ಒಡೆಯರ್

ಮುಂದಿನ ಸುದ್ದಿ
Show comments