Select Your Language

Notifications

webdunia
webdunia
webdunia
webdunia

ಸಾರಿಗೆ ಸಚಿವರ ಸಭೆ ವಿಫಲ

ಸಾರಿಗೆ ಸಚಿವರ ಸಭೆ ವಿಫಲ
bangalore , ಸೋಮವಾರ, 24 ಜುಲೈ 2023 (14:23 IST)
ಖಾಸಗಿ ಸಾರಿಗೆ ಸಂಘಟನೆಗಳ ಜೊತೆಗೆ ಜರುಗಿದ ಸಭೆ ವಿಫಲವಾಗಿದೆ.ಸುದೀರ್ಘ ಮೂರು ಗಂಟೆಗಳ ಕಾಲ‌ ಸಭೆ ಜರುಗಿದ್ದು,ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆ ಜು 27ರಂದು ಸಾರಿಗೆ ಸಂಘಟನೆಗಳು ಕರೆದಿದ್ದ ಬೆಂಗಳೂರು ಬಂದ್ ಬಗ್ಗೆ ಸಚಿವರು ಮಾತಾಡಿಲ್ಲ.ಮತ್ತೆ ಸೋಮವಾರ ಸಾರಿಗೆ  ಸಚಿವ ರಾಮಲಿಂಗ ರೆಡ್ಡಿ ಸಭೆ ಕರೆದಿದ್ದಾರೆ.ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಸಂಘಟನೆಗಳ ಜೊತೆ ಪ್ರತ್ಯೇಕ ಸಭೆ ಕರೆದಿದ್ದು,ಮುಂದಿನ ಸೋಮವಾರ ತಲಾ ಎರಡು ಗಂಟೆಗಳ ಕಾಲ ಸಭೆ ನಡೆಯಲಿದೆ.
 
ಅಂದಿನ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು, ಸಾರಿಗೆ ಅಧಿಕಾರಿ ಸೇರಿದಂತೆ ಮತ್ತಿತರು ಭಾಗಿಯಾಗಲ್ಲಿದ್ದಾರೆ.31.07 2023 ಸೋಮವಾರದಂದು ಸಭೆ ನಿಗಧಿಮಾಡಿದ್ದು,11 - 1 ಗಂಟೆಗೆ ಆಟೋ ಸಂಘಟನೆಗಳು,2 - 4  ಟ್ಯಾಕ್ಸಿ,4 ಗಂಟೆಗೆ- ಬಸ್ ಸಂಘಟನೆಗಳ ಜೊತೆ ಸಭೆ ನಡೆಯಲಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮನೆಗೆ ಕರೆಸಿಕೊಂಡು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ !