Publish Date: Tue, 23 May 2023 (18:38 IST)
Updated Date: Tue, 23 May 2023 (16:40 IST)
ವಿಧಾನಸಭಾಧ್ಯಕ್ಷ ಸ್ಥಾನ ಅತ್ಯಂತ ಉನ್ನತ ಹಾಗೂ ಗೌರವಯುತವಾದ ಹುದ್ದೆ ಎಂದು ರಾಜ್ಯ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಯು.ಟಿ. ಖಾದರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಿನ್ನೆ ರಾತ್ರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಫೋನ್ ಮಾಡಿ ಹೇಳಿದ್ರು. ಪಕ್ಷದ ಆದೇಶ ಪಾಲನೆ ಮಾಡಿದ್ಧೇನೆ. ನಾನು ಮೃದು ಸ್ವಭಾವದವನೇ ಇರಬಹುದು. ಸೌಮ್ಯ ಸ್ವಭಾವವಿದ್ದೂ ಸ್ಪೀಕರ್ ಹುದ್ದೆ ನಿಭಾಯಿಸಬಹುದು. ಅದನ್ನು ನಾನು ಮಾಡಿ ತೋರಿಸುತ್ತೇನೆ ಎಂದರು.