Publish Date: Thu, 05 Jan 2023 (15:29 IST)
Updated Date: Thu, 05 Jan 2023 (15:33 IST)
ನಿತಿನ್ ಗಡ್ಕರಿಯಿಂದ ದಶಪಥ ರಸ್ತೆಯ ವೈಮಾನಿಕ ಸಮೀಕ್ಷೆ ವಿಚಾರವಾಗಿಯೂ ಸಿಎಂ ಪ್ರತಿಕ್ರಿಯಿಸಿದ್ದು,ನಿತಿನ್ ಗಡ್ಕರಿ ಅವರು ಬಂದಿದ್ದಾರೆ.ಏನೆಲ್ಲ ಕೆಲಸಗಳಾಗಬೇಕೋ ಅದೆಲ್ಲ ಮುಗಿದ ಮೇಲೆಯೇ ಲೋಕಾರ್ಪಣೆ ಆಗಲಿದೆ.ಸಂಜೆ ಗಡ್ಕರಿ ಅವರ ಜತೆ ಸಭೆ ಇದೆ.ಚರ್ಚೆ ಮಾಡಿ ತೀರ್ಮಾನ ತಗೋತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ರು.
ಸ್ಯಾಂಟ್ರೋ ರವಿಗೂ ಸಿಎಂ, ಸಚಿವರಿಗೂ ಸಂಪರ್ಕ ಇದೆ ಎಂಬ ಮಾಜಿ ಸಿಎಂ ಎಚ್ಡಿಕೆ ಆರೋಪ ವಿಚಾರವಾಗಿ ಎಚ್ಡಿಕೆ ಆರೋಪಕ್ಕೆ ಸಿಎಂ ಪ್ರತಿಕ್ರಿಯೆ ನೀಡಿದ್ದು,ಸ್ಯಾಂಟ್ರೋ ರವಿ ಯಾರು ಅಂತ ನನಗೆ ಗೊತ್ತಿಲ್ಲ.ಕುಮಾರಸ್ವಾಮಿ ಅವರೇ ಇದರ ಬಗ್ಗೆ ಹೇಳಿದ್ದು,ಎಚ್ಡಿಕೆ ಬಳಿ ಯಾವ ಮಾಹಿತಿ ಇದೆಯೋ ಕೊಡಲಿ, ಆಮೇಲೆ ನೋಡೋಣ ಎಂದು ಹೇಳಿದ್ರು.