Webdunia - Bharat's app for daily news and videos

Install App

ನಾನು ಕೇಂದ್ರ ಸಚಿವ ಸ್ಥಾನದ ಬಗ್ಗೆ ಚಿಂತೆ ಮಾಡಿಲ್ಲ-ಹೆಚ್ ಡಿ ಕುಮಾರಸ್ವಾಮಿ

geetha
ಸೋಮವಾರ, 8 ಜನವರಿ 2024 (16:30 IST)
ಬೆಂಗಳೂರು-ಕೃಷಿ ಇಲಾಖೆ ಕಾರ್ಯಕ್ರಮಕ್ಕೆ ಬಂದವರು ನಮ್ಮ ಮನೆಗೆ ಬಂದಿದ್ದಾರೆ.ಇದೊಂದು ಸೌಹಾರ್ದತೆಯ ಭೇಟಿಯಾಗಿದೆ.ಕೊಬ್ಬರಿಗೆ ರಾಜ್ಯದಲ್ಲಿ ಇರುವ ಸಮಸ್ಯೆಗಳಿಂದ ರೈತರು ನಿರಾಸೆಯಲ್ಲಿದ್ದಾರೆ.ಕೇಂದ್ರದ ಪ್ರಧಾನಿಗಳ ಭೇಟಿ ಮಾಡಿದ ಸಂದರ್ಭದಲ್ಲಿ ೨೫೦₹ ಜಾಸ್ತಿ ಮಾಡುವ ತೀರ್ಮಾನಕ್ಕೆ ಕೇಳಿದ್ದೆವು.ಹಲವು ರೈತರ ಸಮಸ್ಯೆಗಳ ಬಗ್ಗೆ  ಚರ್ಚೆ ಮಾಡಿದ್ದೇವೆ.ಕಾಡುಗೊಲ್ಲ ಸಮಾಜದ ಬೇಡಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ.ನಾನು ಕೇಂದ್ರ ಸಚಿವ ಸ್ಥಾನದ ಬಗ್ಗೆ ಚಿಂತೆ ಮಾಡಿಲ್ಲ.೨೮ ಕ್ಕೆ ೨೮ ಸ್ಥಾನವನ್ನು ಮೈತ್ರಿ ಹಿನ್ನೆಲೆಯಲ್ಲಿ ಗೆಲ್ಲಬೇಕು ಎಂಬುದಷ್ಟೇ ನಮ್ಮ ಯೋಚನೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
 
ಈಗ ಕೇಂದ್ರದಲ್ಲಿ ಮಂತ್ರಿ ಆಗಿ ಏನು ಮಾಡ್ತೀರಿ?ಮಾಧ್ಯಮ ಗಳಲ್ಲೇ ದೊಡ್ಡ ಸುದ್ದಿಯಾಗಿದೆ.ಕೋಡ್ ಆಫ್ ಕಂಡಕ್ಟ್ ಬಂದರೆ ಕೆಲಸ ಮಾಡುವುದಕ್ಕಾಗುತ್ತದಾ?ಈಗ ಕೇಂದ್ರದ ಮಂತ್ರಿ ಆಗಿ ಏನು ಮಾಡುವುದು?ನಾನಂತೂ ಆ ಬಗ್ಗೆ ಯೋಚನೆ ಮಾಡಿಲ್ಲ ಮಾಹಿತಿಯೂ ಇಲ್ಲ.ನಮ್ಮಗೆ ಕಾಂಗ್ರೆಸ್ ನಾಯಕರ ದುರಹಂಕಾರ ತಡೆಯಬೇಕಷ್ಟೇ ,ಪಾಪ ಜೆಡಿಎಸ್ ಮುಗಿಸುವುದಷ್ಟೇ ಇಬ್ಬರು ನಾಯಕರ ಉದ್ದೇಶ ತಾನೇ,ವಿರೋಧಿಗಳಿಗೂ ಸಹ ದೇವೇಗೌಡ ಎಂದೂ ಶಾಪ ಕೊಟ್ಟವರಲ್ಲ.ನಾಡಿನ ಜನತೆ ಅವರ ನಡವಳಿಕೆ ಸಮಾಪ್ತಿ ಮಾಡ್ತಾರೆ ಅಷ್ಟೇ ಎಂದು ದೇವೇಗೌಡರು ಹೇಳಿದ್ದಾರೆ.

ಈಗಿನ ಕಾಂಗ್ರೆಸ್ ಅಧ್ಯಕ್ಷರು ಕಾಂಗ್ರೆಸ್ ೧೩೫ ವರ್ಷಗಳ ಇತಿಹಾಸದ ಪಕ್ಷ ಅಂದಿದ್ದಾರಲ್ಲ.ಇವರ ಈಗಿನ ಇತಿಹಾಸ ಏನು?ಗಾಂಧಿ ಕಟ್ಟಿದ ಕಾಂಗ್ರೆಸ್ ನ ಆಗಿನ ಇತಿಹಾಸ ಬೇರೆ,ಈಸ್ಟ್ ಇಂಡಿಯಾ ಕಂಪನಿ ತರ ದರೋಡೆಯನ್ನು ಈಗಿನ ಕಾಂಗ್ರೆಸ್ ಮುಂದುವರಿಸಿಕೊಂಡು ಹೋಗಿದ್ದಾರೆ.ಹಿಂದಿನ ಕಾಂಗ್ರೆಸ್ ರಾಜಕಾರಣಿಗಳು ಆಸ್ತಿ ಮಾರಿ ಪಕ್ಷ ದೇಶ ಕಟ್ಟಿದ್ದಾರೆ ಆದರೆ ಈಗಿನವರು ಈಸ್ಡ್ ಇಂಡಿಯಾ ಕಂಪನಿ ಲೂಟಿ ಮಾಡಿದ ಹಾಗೆ ಲೂಟಿ ಮುಂದುವರಿಸಿದ್ದಾರೆ.

ಮೈತ್ರಿ ಹಿನ್ನೆಲೆಯಲ್ಲಿ ಹಲವಾರು ನಾಯಕರು ಭೇಟಿ ಆಗ್ತಿದ್ದಾರೆ.ಸಿಟಿ ರವಿ ಸೇರಿ ಹಲವರು ಸೌಹಾರ್ದತೆಯಿಂದ ಕೆಲಸ ಮಾಡಬೇಕು ಅಂತ ಭೇಟಿ ಆಗಿದ್ದಾರೆ.ಅಗತ್ಯ ಬಿದ್ದರೆ ಬಿಜೆಪಿಯಲ್ಲಿ ಮುಂದುವರಿದರೆ ಸುಮಲತಾ ಅವರನ್ನೂ ಭೇಟಿ ಆಗ್ತೇನೆ.ಎಲ್ಲಿ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ನಾನೇ ಆಲೋಚನೆ ಮಾಡಿಲ್ಲ.ಕೆಲವರು ತುಮಕೂರು ಅಂತಿದ್ದೀರಿ ಮಂಡ್ಯ ಅಂತೀರಾ?ಬೆಂಗಳೂರು ಗ್ರಾಮಾಂತರ ದಲ್ಲಿ ನಾನು ಸ್ಪರ್ಧೆ ಮಾಡಬಹುದು ಅಂತ ಪಾಪ ಕೆಲವರು ನಿದ್ದೆಯೇ ಮಾಡ್ತಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments