ತಾಳಿ ಕಟ್ಟುವಾಗ ಹೈಡ್ರಾಮಾ ಮಾಡಿದ ವಧು! ಮುಂದೇನಾಯ್ತು?

Webdunia
ಭಾನುವಾರ, 22 ಮೇ 2022 (14:51 IST)
ಮೈಸೂರು : ಪ್ರೀತಿಸಿದ ಹುಡಗನನ್ನೆ ಕೈ ಹಿಡಿಯಬೇಕು ಎಂದು ನಿರ್ಧರಿಸಿದ್ದ ಯುವತಿ, ಪೋಷಕರ ಒತ್ತಾಯದಿಂದ ಬೇರೆ ಯುವಕನ ಜೊತೆ ಹಸೆಮಣೆ ಏರಿ ಇನ್ನೇನೂ ತಾಳಿ ಕಟ್ಟಿಸಿಕೊಳ್ಳಬೇಕು ಎನ್ನುವಷ್ಟರಲ್ಲೇ ಮೆಗಾ ಡ್ರಾಮಾ ಮಾಡಿದ್ದಾಳೆ.
 
ಆ ಡ್ರಾಮಾದ ಅಸಲಿಯತ್ತು ತಿಳಿದು ವರನ ಕಡೆಯವರು ಫುಲ್ ಗರಂ ಆಗಿ ಗದ್ದಲ ನಡೆಸಿದ ಘಟನೆ ಮೈಸೂರಲ್ಲಿ ನಡೆದಿದೆ.

ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಮೈಸೂರಿನ ಸುಣ್ಣದಕೇರಿಯ ಯುವತಿ, ಹೆಚ್.ಡಿ.ಕೋಟೆಯ ಯುವಕನ ಜೊತೆ ಮದುವೆ ನಡೆಯಬೇಕಿತ್ತು. ನಿನ್ನೆ ಸಂಜೆ ರಿಸೆಪ್ಷನ್ ಕೂಡ ನಡೆದಿತ್ತು. ವಧು, ವರ ಎರಡು ಕಡೆಯ ಅಪಾರ ಬಂಧುಗಳು ಮದುವೆಗೆ ಬಂದಿದ್ದರು. ಇವತ್ತು ಬೆಳಗ್ಗೆ ನಿಗದಿತ ಮುಹೂರ್ತದಲ್ಲಿ ತಾಳಿ ಕಟ್ಟುವ ಕ್ಷಣವೂ ಬಂದು ಬಿಡ್ತು. ಆಗಲೇ ವಧುವಿನ ಡ್ರಾಮಾ ಶುರುವಾಯ್ತು. 

ತಾಳಿಗೆ ಕೊರಳೊಡ್ಡುವ ಕ್ಷಣದಲ್ಲೇ ಯುವತಿ ಕುಸಿದು ಬಿದ್ದಿದ್ದಾಳೆ. ಆಗ ಯುವತಿ ವಿಚಾರಿಸಿದ್ದಾಗ ಪ್ರೀತಿಯ ವಿಚಾರ ಹೇಳಿದ್ದಾಳೆ. ನಾನು ಪ್ರೀತಿಸಿದ ಯುವಕನನ್ನೆ ಮದುವೆಯಾಗುತ್ತೇನೆಂದು ಯುವತಿ ಹೇಳಿದಾಗ ವರನ ಕಡೆಯವರಿಗೆ ಶಾಕ್ ಆಗಿದೆ.

ಕೆಲ ದಿನಗಳ ಹಿಂದೆಯೇ ಯುವತಿ ಪ್ರಿಯಕರ, ಆಕೆ ಮದುವೆಯಾಗುತ್ತಿದ್ದ ಯುವಕನಿಗೆ ಮೆಸೇಜ್ ಕಳಿಸಿ ಮದುವೆ ಆಗಬೇಡ. ಆಕೆ ಮತ್ತು ನಾನು ಪ್ರೀತಿಸುತ್ತಿದ್ದೇವೆ ಎಂದು ಹೇಳಿದ್ದ. ಆದರೆ ವರ ಇದನ್ನು ನಿರ್ಲಕ್ಷಿಸಿ ಮದುವೆಗೆ ಮುಂದಾಗಿದ್ದ. ಯಾವಾಗ ಮೆಸೇಜ್ಗೂ ವರ ಬಗ್ಗದಿದ್ದಾಗ ಯುವತಿಯೇ ಕೊನೆ ಕ್ಷಣದಲ್ಲಿ ಈ ಹೈಡ್ರಾಮಾ ಮಾಡಿ ಮದುವೆಯಿಂದ ತಪ್ಪಿಸಿಕೊಂಡಿದ್ದಾಳೆ. 

ವಿಚಾರ ತಿಳಿಯುತ್ತಲೆ ವರನ ಕಡೆಯವರು ಗಲಾಟೆ ಆರಂಭಿಸಿದ್ದಾರೆ. ವಧುವಿನ ಪೋಷಕರಿಗೆ ಛೀಮಾರಿ ಹಾಕಿದ್ದಾರೆ. ಮದುವೆಗಾಗಿ 5 ಲಕ್ಷ ಹಣ ಖರ್ಚು ಮಾಡಿದ್ದು, ವಧುವಿಗೆ ಚಿನ್ನ, ರೇಷ್ಮೆ ಸೀರೆಗಾಗಿ ವೆಚ್ಚ ಮಾಡಲಾಗಿದೆ. ಎಲ್ಲಾ ಖರ್ಚು ಕಟ್ಟಿಕೊಡಿ ಎಂದು ವರನ ಕುಟುಂಬ ಗಲಾಟೆ ಮಾಡಿತು. ಇದರಿಂದ ಕಲ್ಯಾಣ ಮಂಟಪದಲ್ಲಿ ಗದ್ದಲ ಮನೆ ಮಾಡಿತು.

ವಿಷಯ ತಿಳಿದು ಸ್ಥಳಕ್ಕೆ ಬಂದ ಮೈಸೂರಿನ ಕೆ.ಆರ್. ಠಾಣೆ ಪೊಲೀಸರು ವರ-ವಧು ಎರಡೂ ಕಡೆಯವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪ್ರೀತಿಸಿದ ಯುವಕನನ್ನೇ ಮದುವೆಯಾಗಲು ಯುವತಿ ಮಾಡಿದ ಈ ಡ್ರಾಮಾದಿಂದ ಯುವತಿಯ ಪೋಷಕರಂತೂ ತಲೆತಗ್ಗಿಸಿದ್ದಾರೆ.

ನಂತರ ವಧು-ವರರ ಪೋಷಕರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ವಧುಗೆ ನೀಡಿದ ಆಭರಣವನ್ನು ವರನ ಪೋಷಕರು ವಾಪಸ್ ಪಡೆದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆ ಶಿವಕುಮಾರ್ ಗೆ ಸಿಎಂ ಕಟ್ಟಿದರೆ ಹೈಕಮಾಂಡ್ ಗೆ ಶುರುವಾಗಿದೆ ಈ ಭಯ

ಮೋದಿ ಬರುತ್ತಿದ್ದಾರೆಂದು ಉಡುಪಿಯಲ್ಲಿ ಫುಲ್ ಆಕ್ಟಿವ್ ಆದ ಬಿಜೆಪಿ ನಾಯಕರು

ಭಾರತದ ನಾಗರಿಕ ಅಲ್ಲದಿದ್ದರೂ ಆಧಾರ್ ಕಾರ್ಡ್ ಇದೆ ಎಂದು ಮತದಾನ ಅವಕಾಶ ನೀಡಬೇಕೇ: ಸುಪ್ರೀಂಕೋರ್ಟ್ ತಪರಾಕಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments