Select Your Language

Notifications

webdunia
webdunia
webdunia
webdunia

ಮೆಡಿಕಲ್ ಸೀಟ್ ಸಿಗದಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪಾಪಿ ಪತಿ

ಮೆಡಿಕಲ್ ಸೀಟ್ ಸಿಗದಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪಾಪಿ ಪತಿ
ಹೈದರಾಬಾದ್ , ಮಂಗಳವಾರ, 19 ಸೆಪ್ಟಂಬರ್ 2017 (14:45 IST)
ಹೈದರಾಬಾದ್: ಮೆಡಿಕಲ್ ಸೀಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನ ಕೊಂದು ಪತಿಯೇ ಬೆಂಕಿ ಹಚ್ಚಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯ ನಾಗೊಳೆಯಲ್ಲಿ ನಡೆದಿದೆ.

ಹಾರಿಕಾ(20) ಹತ್ಯೆಯಾದ ದುರ್ದೈವಿ. ಹಾರಿಕಾಳ ನಿರುದ್ಯೋಗಿ ಪತಿ ಕೆ.ಋಷಿಕುಮಾರ್ ಈ ಕೃತ್ಯವೆಸಗಿದ್ದಾನೆ. ಈ ಕುರಿತು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಋಷಿಕುಮಾರ್ ಮತ್ತು ಆತನ ಪೋಷಕರನ್ನು ಬಂಧಿಸಿದ್ದಾರೆ.

ಹಾರಿಕಾ ಮತ್ತು ಋಷಿಕುಮಾರ್ 2 ವರ್ಷದ ಹಿಂದೆ ವಿವಾಹವಾಗಿದ್ದರು. ಮೂಲತಃ ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯವರಾದ ದಂಪತಿ, ಮದುವೆಯಾದ ಬಳಿಕ ಹೈದರಾಬಾದ್ ನ ನಾಗೊಳೆಯ ರಾಕ್ ಟೌನ್ ಕಾಲೋನಿಯಲ್ಲಿ ನೆಲೆಸಿದ್ದರು.  ಹಾರಿಕಾ ವರ್ಷದಿಂದ ಮೆಡಿಕಲ್ ಎಂಟ್ರೆನ್ಸ್ ಪರೀಕ್ಷೆಗಾಗಿ ಓದುತ್ತಿದ್ದರು. ಪರೀಕ್ಷೆ ಬರೆದಿದ್ದ ಹಾರಿಕಾ ಪಾಸ್ ಆಗಿರಲಿಲ್ಲ. ಒಂದು ವೇಳೆ ಫೇಲ್ ಆದರೆ ಡಿವೋರ್ಸ್ ನೀಡುವುದಾಗಿ ಬೆದರಿಕೆ ಹಾಕಿದ್ದ ಎಂಬುದಾಗಿ ಆಕೆ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದನಂತೆ. ಇತ್ತೀಚೆಗೆ ಹಾರಿಕಾ ಕಾಮಿನೇನಿ ಮೆಡಿಕಲ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಕೋರ್ಸ್ ತೆಗೆದುಕೊಂಡಿದ್ದು, ಇದು ಆಕೆಯ ಪತಿಗೆ ಇಷ್ಟವಿರಲಿಲ್ಲವೆಂದು ಅಸಿಸ್ಟೆಂಟ್ ಕಮಿಷನರ್ ಪಿ.ವೇಣುಗೋಪಾಲ್ ರಾವ್ ತಿಳಿಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಸೇಲ್ಸ್ ಮನ್ ಆಗಿದ್ದ ಋಉಷಿಕುಮಾರ್ ಇತ್ತೀಚೆಗಷ್ಟೆ ಉದ್ಯೋಗ ಕಳೆದುಕೊಂಡಿದ್ದ. ಹೀಗಾಗಿ ಸ್ವಂತ ಉದ್ಯೋಗ ಮಾಡುವ ದೃಷ್ಟಿಯಿಂದ ಪತ್ನಿ ಬಳಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎಂದು ಪೊಲೀಸರಿಗೆ ಹಾರಿಕಾ ಪೋಷಕರು ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಿ ನಿಂತ್ರೂ ಗೆಲ್ಲುತ್ತೇನೆ: ಸಿಎಂ