Select Your Language

Notifications

webdunia
webdunia
webdunia
webdunia

ನೀವೇನೂ ಸರ್ವಾಧಿಕಾರಿಯೇ: ಸಿಎಂ ವಿರುದ್ಧ ಪೂಜಾರಿ ಕೆಂಡಾಮಂಡಲ

ನೀವೇನೂ ಸರ್ವಾಧಿಕಾರಿಯೇ: ಸಿಎಂ ವಿರುದ್ಧ ಪೂಜಾರಿ ಕೆಂಡಾಮಂಡಲ
ಮಂಗಳೂರು , ಶನಿವಾರ, 17 ಜೂನ್ 2017 (13:28 IST)
ಖಾಸಗಿ ವೈದ್ಯಕೀಯ ಮಸೂದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಮಸೂದೆ ಜಾರಿ ಮುನ್ನ ಪಕ್ಷದಲ್ಲಿ ಚರ್ಚಿಸಬೇಕಾಗಿತ್ತು. ಮನಬಂದಂತೆ ಮಾಡಲು ನೀವೇನೂ ಸರ್ವಾಧಿಕಾರಿಯೇ ಎಂದು ಮಾಜಿ ಕೆಪಿಸಿಸಿ ಅದ್ಯಕ್ಷ ಜನಾರ್ದನ ಪೂಜಾರಿ ಕೆಂಡಾಮಂಡಲವಾಗಿದ್ದಾರೆ.
 
ಸಿಎಂ ಸಿದ್ದರಾಮಯ್ಯಗೆ ಅಧಿಕಾರದ ಮದ ಏರಿದ್ದರಿಂದ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಅದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ವರ್ತಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಖಾಸಗಿ ವೈದ್ಯಕೀಯ ಮಸೂದೆ ಜಾರಿಗೆ ತರುವ ಮುನ್ನ ನೀವು ಏಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೀರಿ ಎನ್ನುವುದನ್ನು ಬಹಿರಂಗಪಡಿಸಿ ಎಂದು ಸವಾಲ್ ಹಾಕಿದ್ದಾರೆ.
 
ಇಂದು ಬೆಳಿಗ್ಗೆ ಹಿರಿಯ ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿರುವಂತೆಯೇ ಜನಾರ್ದನ ಪೂಜಾರಿ ಕೂಡಾ ಸಿಎಂ ಸಿದ್ದರಾಮಯ್ಯ ವಿರುದ್ಧ ಗರಂ ಆಗಿದ್ದಾರೆ. 
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಪಾಕಿಸ್ತಾನ ಪಂದ್ಯದ ಇಫೆಕ್ಟ್: ನಾಳೆ ಜಾಹೀರಾತು ದರ ಕೇಳಿದರೂ ಬೆಚ್ಚಿಬೀಳುತ್ತೀರಿ!