Webdunia - Bharat's app for daily news and videos

Install App

ಹೆಂಡತಿಯಿಂದ ದೂರವಾಗಿದ್ದ ಗಂಡ ಸಿನಿಮಾ ಸ್ಟೈಲ್ ನಲ್ಲಿ ರೈಲಲ್ಲಿ ಎದುರಾದ: ಮುಂದೇನಾಯ್ತು?

Webdunia
ಶನಿವಾರ, 29 ಜೂನ್ 2019 (19:04 IST)
ಹೆಂಡತಿಯಿಂದ ದೂರವಾಗಿರುವ ಗಂಡನೊಬ್ಬ ಸಿನಿಮೀಯ ರೀತಿಯಲ್ಲಿ ಪತ್ನಿಗೆ ರೈಲಿನಲ್ಲಿ ಎದುರಾದ ಘಟನೆ ನಡೆದಿದೆ.

ಕೌಟುಂಬಿಕ ಕಾರಣಗಳಿಂದ ಪತ್ನಿಗೆ ವಿಚ್ಛೇದನ ನೀಡಲು ನಿರ್ಧರಿಸಿ ಕೋರ್ಟ್ ಮೆಟ್ಟಿಲೇರಿದ್ದ ಗಂಡ. ಬಳಿಕ ಆಕೆಯಿಂದ ದೂರಾಗಿ ವಾಸಿಸುತ್ತಿದ್ದ.

ಬೆಂಗಳೂರಿನಲ್ಲಿ ರೈಲಿನಲ್ಲಿ ಸಿನಿಮೀಯ ರೀತಿಯಲ್ಲಿ ಪತ್ನಿಗೆ ಎದುರಾಗಿದ್ದಾನೆ ಮಹಿಳೆಯ ಗಂಡ ಬಾಲಮುರುಗನ್. ಸಂಬಂಧಿಕರು ನೀಡಿದ ಮಾಹಿತಿ ಮೂಲಕ ಗಂಡನನ್ನ ಹುಡುಕಾಡಿ ಪತ್ತೆ ಹಚ್ಚಿದ್ದಳು ಹೆಂಡತಿ. ಚೈನ್ನೈ ಮೂಲದ ಸಾಫ್ಟವೇರ್ ಇಂಜಿನಿಯರ್ ಬಾಲಮುರುಗನ್ 2011 ರಲ್ಲಿ ರೇಖಾ ಎಂಬಾಕೆಯನ್ನ ಮದುವೆಯಾಗಿದ್ದನು. 
ದಂಪತಿಗೆ ಆರು ವರ್ಷದ ಹೆಣ್ಣು ಮಗಳಿದ್ದಾಳೆ.

ಆದರೆ 2015 ರಲ್ಲಿ ಕೌಟುಂಬಿಕ ಕಲಹದಿಂದಾಗಿ ಬಾಲಮುರುಗನ್ ಪತ್ನಿಗೆ ಡೈವೋರ್ಸ್ ನೀಡಲು ಮುಂದಾಗಿದ್ದ. 
ಕೋರ್ಟ್ ಮೆಟ್ಟಿಲೇರಿದ್ದ ಬಳಿಕ ಆಕೆಯಿಂದ ಸಂಪರ್ಕ ಕಡಿದುಕೊಂಡು ಬೇರೆಯಾಗಿ ವಾಸವಿದ್ದನು.

ಗಂಡನನ್ನ ಹುಡುಕಾಡುತ್ತಿದ್ದ ರೇಖಾ ಚೆನ್ನೈ- ಯಶವಂತಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ಹೊರಟಿದ್ದಳು.
ಪರಿಚಿತರೊಬ್ಬರು ರೇಖಾಗೆ ಕರೆ ಮಾಡಿ ಬಾಲಮುರುಗನ್ ಅದೇ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುತ್ತಿರುವುದಾಗಿ ತಿಳಿಸಿದ್ದರು. ಹೀಗಾಗಿ ಮಾರ್ಗ ಮಧ್ಯೆ ಗಂಡನನ್ನ ಹುಡುಕಾಡಿದ್ದಾರೆ ರೇಖಾ.

ತಾನು ಇದ್ದ S-4 ಬೋಗಿಯಿಂದ S-3 ಬೋಗಿಗೆ ಬಂದ ರೇಖಾಳಿಗೆ ಗಂಡ ಎದುರಾಗಿದ್ದ. ಆತನ ಬಳಿ ಹೋಗಿ 'ನನಗೆ ಯಾರೂ ಇಲ್ಲ. ನಾನು ನಿನ್ನನ್ನು ಹುಡುಕಿಕೊಂಡು ಬೆಂಗಳೂರಿಗೆ ಹೊರಟಿದ್ದೆ. ನನಗೆ ಯಾಕೆ ವಿಚ್ಛೇದನ ನೀಡುತ್ತಿದ್ದೀಯಾ? ನಾನು ನಿನ್ನನ್ನು ಹೇಗೆ ಹುಡುಕುವುದು? ನನಗೆ ನಿನ್ನ ಮೊಬೈಲ್ ನಂಬರ್, ವಿಳಾಸವಾದರೂ ನೀಡು ಎಂದು ಅಂಗಲಾಚಿದ್ದಳು.

ಆದರೆ ನಿರಾಕರಿಸಿದ ಗಂಡ ಬಾಲಮುರುಗನ್ ರೈಲಿನಲ್ಲೇ ಎಲ್ಲರ ಮುಂದೆ ಆಕೆಯನ್ನ ತಳ್ಳಿ ಗಲಾಟೆ ಮಾಡಿದ್ದ. ಪ್ರಶ್ನಿಸಿದ ಸಹ ಪ್ರಯಾಣಿಕರಿಗೆ ಬೈದಿದ್ದಾನೆ ಬಾಲಮುರುಗನ್. ಈ ಸಂಬಂಧ ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ರೇಖಾ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral Video: ಜಗಳ ಮಾಡ್ತೀಯಾ ಅಂತ ಪತ್ನಿಯನ್ನು ಬಾಲ್ಕನಿಗೇ ನೇತು ಹಾಕಿದ ಗಂಡ

ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

ಮುಂದಿನ ಸುದ್ದಿ
Show comments