Select Your Language

Notifications

webdunia
webdunia
webdunia
webdunia

ಹಸಿವು ಮುಕ್ತ ರಾಜ್ಯ ಸಾಕಾರ– ಸಿದ್ದರಾಮಯ್ಯಗೆ ತೃಪ್ತಿ

ಹಸಿವು ಮುಕ್ತ ರಾಜ್ಯ ಸಾಕಾರ– ಸಿದ್ದರಾಮಯ್ಯಗೆ ತೃಪ್ತಿ
ಬೆಂಗಳೂರು , ಗುರುವಾರ, 22 ಫೆಬ್ರವರಿ 2018 (17:05 IST)
ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯ ಮಾಡುವುದು ನಮ್ಮ ಕನಸಾಗಿತ್ತು. ಈಗ ಅದು ಸಾಧ್ಯವಾಗಿದ್ದು, ಇದಕ್ಕಿಂತ ತೃಪ್ತಿ ಬೇರೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
 
ವಿಧಾನ ಮಂಡಲದ ಉಭಯ ಸದನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು. ಅನ್ನಭಾಗ್ಯ ಯೋಜನೆ ಮೂಲಕ ನಮ್ಮ ಕನಸನ್ನು ಸಾಕಾರ ಮಾಡುತ್ತಿದ್ದೇವೆ. ಇಂದಿರಾ ಕ್ಯಾಂಟೀನ್‌ನಿಂದ ರಾಜ್ಯ ಹಸಿವು ಮುಕ್ತ ಆಗಿದೆ ಎಂದಿದ್ದಾರೆ.
 
ಹಸಿದು ಬಂದವರಿಗೆ ಅನ್ನ, ಹಾಲು, ಬೆಣ್ಣೆ ನೀಡಬೇಕು ಎಂದು ಸರ್ವಜ್ಞರೇ ಹೇಳಿದ್ದಾರೆ. ಇದನ್ನು ಸರಕಾರದ ಕೊಡುಗೆ ಎಂದು ಹೇಳುವುದಿಲ್ಲ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಜನಿ, ಕಮಲ್ ರಾಜಕೀಯ ಎಂಟ್ರಿಗೆ ಜಯಪ್ರದಾ ಪ್ರತಿಕ್ರಿಯೆ