Select Your Language

Notifications

webdunia
webdunia
webdunia
webdunia

ಕಾಡುಪ್ರಾಣಿಗೆ ವ್ಯಕ್ತಿ ಬಲಿಯಾಗಿದ್ದು ಹೇಗೆ ಗೊತ್ತಾ?

ಕಾಡುಪ್ರಾಣಿಗೆ ವ್ಯಕ್ತಿ ಬಲಿಯಾಗಿದ್ದು ಹೇಗೆ ಗೊತ್ತಾ?
ಮಂಡ್ಯ , ಗುರುವಾರ, 20 ಡಿಸೆಂಬರ್ 2018 (19:45 IST)
ಕಾಡುಪ್ರಾಣಿಯೊಂದು ವ್ಯಕ್ತಿಯೊಬ್ಬನ ಸಾವಿಗೆ ಕಾರಣವಾದ ಘಟನೆ ನಡೆದಿದೆ.

ಕಾಡುಪ್ರಾಣಿ ಅಡ್ಡ ಬಂದಿದ್ರಿಂದ‌ ಮುಗ್ಗರಿಸಿದ ಬೈಕ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮಂಡ್ಯದ ಮುತ್ತತ್ತಿಯ ಭೀಮೇಶ್ವರಿಯಲ್ಲಿ ಫಿಶ್ಶಿಂಗ್ ಕ್ಯಾಂಪ್ ಮುಂಭಾಗದಲ್ಲಿ ಈ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ನಡೆದ ಘಟನೆಯಲ್ಲಿ ಕನಕಪುರ ತಾಲೂಕು ಬೊವಳ್ಳಿ ಗ್ರಾಮದ ವರದೇಗೌಡ(62)ಮೃತಪಟ್ಟಿದ್ದಾರೆ.

ಮುತ್ತತ್ತಿಯ ದೇವರ ದರ್ಶನ ಮುಗಿಸಿ ವಾಪಾಸ್ಸಾಗುವಾಗ ಅವಘಡ ಸಂಭವಿಸಿದೆ. ಬೈಕ್ ಗೆ ಕಾಡು ಪ್ರಾಣಿ ಅಡ್ಡ ಬಂದು ಸಂಭವಿಸಿದ ದುರ್ಘಟನೆ ಇದಾಗಿದೆ. ಈ ಕುರಿತು ಹಲಗೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತಹಸೀಲ್ದಾರ್ ರ ವಾಹನವನ್ನೇ ಎಗರಿಸಿ ಕೈಚಳಕ ತೋರಿದ ಕಳ್ಳರು!