Select Your Language

Notifications

webdunia
webdunia
webdunia
webdunia

ಅತೃಪ್ತ ಶಾಸಕ ಸುಧಾಕರ್ ಯೂ ಟರ್ನ್ ಹೊಡೆದದ್ಯಾಕೆ?

ಅತೃಪ್ತ ಶಾಸಕ ಸುಧಾಕರ್ ಯೂ ಟರ್ನ್ ಹೊಡೆದದ್ಯಾಕೆ?
ಚಿಕ್ಕಬಳ್ಳಾಪುರ , ಸೋಮವಾರ, 3 ಜೂನ್ 2019 (15:54 IST)
ಅತೃಪ್ತರ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ಶಾಸಕ ಸುಧಾಕರ್ ಏಕಾಏಕಿಯಾಗಿ ಯೂ ಟರ್ನ್ ಹೊಡೆದಿದ್ದಾರೆ.

ಯೂ ಟರ್ನ್ ಹೊಡೆದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ನಡೆ ಕುತೂಹಲ ಮೂಡಿಸುತ್ತಿದೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲವೇ ಅಲ್ಲ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಒಳ್ಳೆಯ ಆಡಳಿತ ಕೊಡಬೇಕು. ಅಸಮಧಾನ,  ಭಿನ್ನಾಭಿಪ್ರಾಯಗಳು ಮುಗಿದುಹೋದ ಅಧ್ಯಾಯ ಎಂದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ಸಾಫ್ಟ್ ಕಾರ್ನರ್ ತಾಳಿದ ಸುಧಾಕರ್ ನಡೆ ಗಮನ ಸೆಳೆದಿದೆ. ಈ ಹಿಂದೆ ಮುಖ್ಯಮಂತ್ರಿ ಹೆಚ್ಡಿಕೆ ವಿರುದ್ಧ ಅಸಮಧಾನ ಹೊರಹಾಕುತ್ತಿದ್ದರು ಸುಧಾಕರ್.

ಎಲ್ಲಾ ಮೈತ್ರಿ ನಾಯಕರ ನಡುವೆ ಸಿಎಂ ಕೂಲಂಕುಷವಾಗಿ ವಿಚಾರ ಮಾಡಿದ್ದಾರೆ. ಎಲ್ಲರನ್ನೂ ವಿಶ್ವಾಸದಿಂದ ನಡೆಸಿಕೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. 

ಕರ್ನಾಕ ರಾಜ್ಯದ ಆಡಳಿತ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಹೀಗಂತ ಚಿಕ್ಕಬಳ್ಳಾಪುರ ನಗರದಲ್ಲಿ ಶಾಸಕ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮದಲ್ಲದ ತಪ್ಪಿಗೆ ಇಬ್ಬರು ಮಕ್ಕಳು ಬಲಿ!