Webdunia - Bharat's app for daily news and videos

Install App

ರಾಜ್ಯದಲ್ಲಿ ಮತ್ತೆ ಮರ್ಯಾದೆ ಹತ್ಯೆ ಶಂಕೆ?

Webdunia
ಸೋಮವಾರ, 9 ಜುಲೈ 2018 (18:33 IST)
ಮರ್ಯಾದೆಗೆ ಹೆದರಿ ಅಜ್ಜಿ ಮೊಮ್ಮಗಳನ್ನೇ ಕೊಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ಚನ್ನಗಿರಿ ತಾಲೂಕಿನ ಮರವಂಜಿಯಲ್ಲಿ ನಡೆದಿದೆ. ಬಾಲಕಿ ಕೆಲ ದಿನಗಳ‌ ಹಿಂದೆ ವಿಷಸೇವಿಸಿ ಆತ್ಮಹತ್ಯೆಗೆ ಯತ್ನ ನಡೆಸಿದ್ದಳು, ಆತ್ಮಹತ್ಯೆ ಯತ್ನ ನಡೆಸಿದ ವೇಳೆ ಅಜ್ಜಿ ಹಗ್ಗದಿಂದ ಬಿಗಿದ ಬಾಲಕಿಯನ್ನು ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ.

ಅನುಮಾನಗೊಂಡು ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದರು, ಬಳಿಕ ವಿಚಾರಣೆ ನಡೆಸಿದ ಪೊಲೀಸರು ವರದಿ ಆಧಾರದ ಮೇಲೆ ಅಜ್ಜಿ ದ್ರಾಕ್ಷಾಯಣಿ, ತಂದೆ ಪುರುಷೋತ್ತಮನನ್ನು ಬಂಧಿಸಿ ವಿಚಾರಣೆಗೆ ಒಳ ಪಡಿಸಿದ್ದಾರೆ.  ಕಳೆದ ಕೆಲ ತಿಂಗಳ ಹಿಂದೆ ಬಾಲಕಿ ಅನ್ಯ ಕೋಮಿನ ಯುವಕನ‌ ಜೊತೆ ಓಡಿ ಹೋಗಿದ್ದಳು. ಬಾಲಕಿಯ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಫೋಕ್ಸೋ ದೂರು ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಬಂಧಿಸಿದ್ದರು. ಆದರೆ ಮತ್ತೆ ಬಾಲಕಿ ಆತನನ್ನೇ ಮದುವೆಯಾಗುವುದಾಗಿ  ಹಠ ಹಿಡಿದು 2 ನೇ ಬಾರಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ಅಜ್ಜಿ  ಹಗ್ಗದಿಂದ ಕತ್ತು ಹಿಸುಕಿದ್ದಾಳೆ, ಮೊದಲೆ ವಿಷ ಕುಡಿದಿದ್ದ ಬಾಲಕಿ ಪ್ರತಿರೋಧ ತೋರದೆ  ಕೊನೆಯುಸಿರು ಎಳೆದಿದ್ದಾಳೆ ಎನ್ನಲಾಗಿದೆ.

ಇನ್ನೂ ಚನ್ನಗಿರಿ ಪೊಲೀಸರು ಅಜ್ಜಿ ದ್ರಾಕ್ಷಾಯಣಿ ಹಾಗೂ ತಂದೆ ಪುರುಷೋತ್ತಮನನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments