ರಾಜ್ಯದಲ್ಲಿ ಮತ್ತೆ ಮರ್ಯಾದೆ ಹತ್ಯೆ ಶಂಕೆ?

Webdunia
ಸೋಮವಾರ, 9 ಜುಲೈ 2018 (18:33 IST)
ಮರ್ಯಾದೆಗೆ ಹೆದರಿ ಅಜ್ಜಿ ಮೊಮ್ಮಗಳನ್ನೇ ಕೊಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ಚನ್ನಗಿರಿ ತಾಲೂಕಿನ ಮರವಂಜಿಯಲ್ಲಿ ನಡೆದಿದೆ. ಬಾಲಕಿ ಕೆಲ ದಿನಗಳ‌ ಹಿಂದೆ ವಿಷಸೇವಿಸಿ ಆತ್ಮಹತ್ಯೆಗೆ ಯತ್ನ ನಡೆಸಿದ್ದಳು, ಆತ್ಮಹತ್ಯೆ ಯತ್ನ ನಡೆಸಿದ ವೇಳೆ ಅಜ್ಜಿ ಹಗ್ಗದಿಂದ ಬಿಗಿದ ಬಾಲಕಿಯನ್ನು ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ.

ಅನುಮಾನಗೊಂಡು ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದರು, ಬಳಿಕ ವಿಚಾರಣೆ ನಡೆಸಿದ ಪೊಲೀಸರು ವರದಿ ಆಧಾರದ ಮೇಲೆ ಅಜ್ಜಿ ದ್ರಾಕ್ಷಾಯಣಿ, ತಂದೆ ಪುರುಷೋತ್ತಮನನ್ನು ಬಂಧಿಸಿ ವಿಚಾರಣೆಗೆ ಒಳ ಪಡಿಸಿದ್ದಾರೆ.  ಕಳೆದ ಕೆಲ ತಿಂಗಳ ಹಿಂದೆ ಬಾಲಕಿ ಅನ್ಯ ಕೋಮಿನ ಯುವಕನ‌ ಜೊತೆ ಓಡಿ ಹೋಗಿದ್ದಳು. ಬಾಲಕಿಯ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಫೋಕ್ಸೋ ದೂರು ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಬಂಧಿಸಿದ್ದರು. ಆದರೆ ಮತ್ತೆ ಬಾಲಕಿ ಆತನನ್ನೇ ಮದುವೆಯಾಗುವುದಾಗಿ  ಹಠ ಹಿಡಿದು 2 ನೇ ಬಾರಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ಅಜ್ಜಿ  ಹಗ್ಗದಿಂದ ಕತ್ತು ಹಿಸುಕಿದ್ದಾಳೆ, ಮೊದಲೆ ವಿಷ ಕುಡಿದಿದ್ದ ಬಾಲಕಿ ಪ್ರತಿರೋಧ ತೋರದೆ  ಕೊನೆಯುಸಿರು ಎಳೆದಿದ್ದಾಳೆ ಎನ್ನಲಾಗಿದೆ.

ಇನ್ನೂ ಚನ್ನಗಿರಿ ಪೊಲೀಸರು ಅಜ್ಜಿ ದ್ರಾಕ್ಷಾಯಣಿ ಹಾಗೂ ತಂದೆ ಪುರುಷೋತ್ತಮನನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೂವರು ಮಕ್ಕಳನ್ನು ಕೊಂದು ಸಾವಿಗೂ ಯತ್ನಿಸಿದ ತಾಯಿ, ಮುಂದೇನಾಯ್ತು

ಬಲೂಚಿಸ್ತಾನದಲ್ಲಿ 145ಜನರನ್ನು ಕೊಂದು ಪ್ರತೀಕಾರ ತೀರಿಸಿಕೊಂಡ ಪಾಕ್‌

ಸಿಜೆ ರಾಯ್ ಸಾವು, ಮಹತ್ವದ ತನಿಖೆ ಹಂತದಲ್ಲೇ ಹೊಸ ಬಾಂಬ್ ಸಿಡಿಸಿದ ಪ್ರದೀಪ್ ಈಶ್ವರ್

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬರೀ ಚೊಂಬು: ಸಿಎಂ ಸಿದ್ದರಾಮಯ್ಯ

ಇನ್ನೇನು ಮದುವೆ ಆಗುಬೇಕೆನ್ನುಷ್ಟರಲ್ಲಿ ವರನಿಗೆ ಚಾಕು ಇರಿತ, ತನಿಖೆ ಶುರು ಮಾಡಿದ ಖಾಕಿಗೆ ಬಿಗ್ ಶಾಕ್

ಮುಂದಿನ ಸುದ್ದಿ
Show comments