Webdunia - Bharat's app for daily news and videos

Install App

ಬೆಳೆಗಾರರಿಗೆ ಕಣ್ಣೀರು ತರಿಸುತ್ತಿರುವ ಈರುಳ್ಳಿ!

Webdunia
ಸೋಮವಾರ, 9 ಜುಲೈ 2018 (18:27 IST)
ಕೋಟೆ ನಾಡಿನಲ್ಲಿ ರೈತ ಸದಾ ಒಂದಲ್ಲ   ಒಂದು ಸಮಸ್ಯೆಯಲ್ಲಿ ಸಿಲುಕುತ್ತಿದ್ದಾನೆ. ಅದರಂತೆ  ಮಳೆಯನ್ನೆ ನಂಬಿ  ಬಿತ್ತಿದ್ದ ಈರುಳ್ಳಿ ಮೊಳಕೆಯೊಡೆದಿವೆ. ಆದ್ರೆ  ಇದೀಗ ಮಳೆಯೂ ಕೈ ಕೊಡುತ್ತಿದೆ. ಇತ್ತ ಕೊಳವೆ ಬಾವಿಯಲ್ಲೂ ಕೂಡ ನೀರಿನ ಪ್ರಮಾಣ ಕಡಿಮೆ ಆಗ್ತಾ ಇರೊದು ಈರುಳ್ಳಿ ಬೆಳೆಗಾರರಿಗೆ ಸಮಸ್ಯೆಯಾಗಿದೆ. ಒಂದು ವೇಳೆ ಮಳೆ ಬಂದು ಉತ್ತಮ ಬೆಲೆ ಸಿಗದೆ ಹೋದ್ರೆ ಈ ಭಾಗದ ರೈತರನ್ನ ದೇವರೇ ಕಾಪಾಡಬೇಕಾಗಿದೆ.  

ಚಿತ್ರದುರ್ಗ ಕೋಟೆ  ನಾಡಿನಲ್ಲಿ  ಪ್ರಮುಖ ಬೆಳೆಗಳಲ್ಲಿ ರಾಗಿ ಮುಸುಕಿನ ಜೋಳ ಹಾಗೂ ತೊಟಗಾರಿಕೆ ಬೆಳೆಗಳಿಗೆ ಬಂದ್ರೆ ಈರುಳ್ಳಿ ಪ್ರಮುಖವಾಗುತ್ತದೆ. ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲೂಕುಗಳಲ್ಲಿ ಹೆಚ್ಚಾಗ  ಈರುಳ್ಳಿ ಬೆಳೆಗಳನ್ನು ಬೆಳೆಯುತ್ತಾರೆ. ಇದುವರೆಗೂ 17 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ರೈತರು ಈರುಳ್ಳಿಯನ್ನು ಬಿತ್ತಿದ್ದಾರೆ. ಇದುವರೆಗೂ ಬಿದ್ದಿದ್ದ   ಅಲ್ಪ ಸ್ವಲ್ಪ ಮಳೆಯಿಂದಾಗಿ ಈರುಳ್ಳಿ ಬೀಜ ಮೊಳಕೆ ಯೊಡೆದು   ಸಣ್ಣ ಸಣ್ಣ ಗಿಡಗಳಾಗಿ ಬೆಳೆದು ನಿಂತಿವೆ. ಸರಿಯಾದ ಸಮಯಕ್ಕೆ ವರುಣ ಕೈ ಕೊಟ್ಟಿರುವುದರಿಂದ  ಚಿಗುರೊಡೆದ ಈರುಳ್ಳಿ ಮೊಳಕೆ ಒಣಗುವ ಸ್ಥಿತಿ ನಿರ್ಮಾಣವಾಗಿದೆ.

ಮಳೆಯನ್ನು ಆಧರಿಸಿ ಸುಮಾರು 1800 ಹೆಕ್ಟೇರ್ ಹಾಗೂ ನೀರಾವರಿಯನ್ನು ನಂಬಿ 17 ಸಾವಿರ ಹೇಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆಯನ್ನು  ಮಾಡಿದ್ದಾರೆ. ಒಂದು ಕಡೆ ಮೆಳೆ ಕೈ ಕೊಟ್ಟರೆ. ಇನ್ನೊಂದು ಕಡೆಯಲ್ಲಿ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿಯುತ್ತಾ ಇದೆ. ಇದು ರೈತರನ್ನು ಚಿಂತೇಗೀಡು ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವ್ಯಾಪಾರಿಗಳಿಗೆ ನೋಟಿಸ್ ನೀಡಿರುವುದರ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ ಎಂದ ಸಿಟಿ ರವಿ

ದರ್ಶನ್ ಪರ ಲಾಯರ್ ಕಪಿಲ್ ಸಿಬಲ್ ಬೇಕೆಂದೇ ಕೋರ್ಟ್ ಗೆ ಗೈರಾದರಾ

ಜೈಲಲ್ಲಿರುವ ಸೋನಂ ರಘುವಂಶಿ ಏನು ಮಾಡ್ತಿದ್ದಾಳೆ

ಆ.1ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ: ಎ.ನಾರಾಯಣಸ್ವಾಮಿ

Arecanut Price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

ಮುಂದಿನ ಸುದ್ದಿ
Show comments